ನೂತನ ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಿಗೆ ವಿಶೇಷ ಸನ್ಮಾನ 

0
55

ಕಲಬುರಗಿ : ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ನೂತನ ಅಧ್ಯಕ್ಷರಾಗಿ ವೀರಣ್ಣಗೌಡ ಪಾಟೀಲ ಮಲ್ಲಾಬಾದಿ ನೇಮಕ ಗೊಂಡಿದ್ದಾರೆ. ಇಂದು ಅಕ್ಕ ಮಹಾದೇವಿ ಕಾಲೋನಿ ಸ್ನೇಹ ಸಂಗಮ ಸೇವಾ ಸಂಘದ ವತಿಯಿಂದ ವಿಶೇಷ ಸನ್ಮಾನ ಮಾಡಿದರು.

ವೀರಣ್ಣಗೌಡರು ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಅನುಭವ ಇದ್ದವರು. ಕಿಸಾನ್ ಕಾಂಗ್ರೆಸ್ ಘಟಕ ಜಿಲ್ಲಾಧ್ಯಕ್ಷರಾಗಿದು ಒಂದು ಶಕ್ತಿ ಬದ್ಧತೆ ಆಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ ನೆಲೋಗಿ ಮಾತನಾಡಿದರು.

Contact Your\'s Advertisement; 9902492681

ವೀರಣ್ಣಗೌಡರು ರಾಜಕೀಯವಾಗಿ, ಸಾಮಾಜಿಕವಾಗಿ ಕೆಲಸ ಮಾಡಿದು ಎಲ್ಲಾ ರಾಜಕೀಯ ಪಕ್ಷಗಳ ಮೂಲ ತತ್ವ ಸಿದ್ಧಾಂತಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಉತ್ತಮ ವಾಗ್ಮಿಗಳು ಆಗಿದ್ದಾರೆ ಎಂದು ಸ್ನೇಹ ಸಂಗಮ ಕಾರ್ಯದರ್ಶಿಗಳಾದ ಮಹಾಂತೇಶ ಪಾಟೀಲ ಹೇಳಿದರು.

ಕಾಂಗ್ರೆಸ್ ಪಕ್ಷದ ಧುರೀಣರು ಶಿವಶರಣಪ್ಪ ಕೋಬಾಳ, ತುಕರಾಮ ಪಾಟೀಲ, ಅರುಣಗೌಡ ಪಾಟೀಲ, ಸ್ವಾಮಿ ಫರತಾಬಾದ, ಮಲ್ಲಿಕಾರ್ಜುನ ಆಲೂರು, ಸಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಅಜಗೊಂಡ, ಪ್ರಭುಲಿಂಗ ಗೋಬ್ಬುರ, ಲಿಂಗಪ್ಪ ಪೂಜಾರಿ, ಹುಲ್ಲಕಂಠರಾಯ ಅರಳಗುಂಡಗಿ, ಹಣಮಂತರಾಯ ಉದನೂರ, ಶಾಂತಪ್ಪ ನಿಂಬಾಳ, ಬಸವರಾಜ ಮರತೂರ, ಲಕ್ಷ್ಮಪುತ್ರ ಜಮಾದಾರ, ದೇವಿಂದ್ರ ಜಮಾದಾರ, ಚಂದಪ್ಪ ಮಾಸ್ಟರ್, ಮಲ್ಲಿಕಾರ್ಜುನ ದುತ್ತರಘಾಂವ, ಶ್ರೀ ಶೈಲ ಬಳ್ಳೂರಗಿ, ಶರಣಪ್ಪ ಅಂಧಾನಿ, ಕೋರೆ ವಕೀಲರು, ಖಾಜಾ ಪಟೇಲ್, ಸಂಭಾಜಿ, ಸವೆರಪ್ಪ ಪೂಜಾರಿ, ಮಹಾಂತಗೌಡ ಧುದನಿಗಿ, ವಸಂತ ನರಭೋಳ, ಭೀಮರಾಯಗೌಡ ಮೇಳಕುಂಧಿ ಇತರರ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here