ಕಲಬುರಗಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ವೀರಣ್ಣಗೌಡ ಪಾಟೀಲ್ ಮಲ್ಲಾಬಾದಿ ನೇಮಕ

0
60

ಕಲಬುರಗಿ: ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ವೀರಣ್ಣಗೌಡ ಮಲ್ಲಾಬಾದಿ ಅವರಿಗೆ ವಾಯು ವಿಹಾರ ಗೆಳೆಯರ ಬಳಗ ಇಂದು ಮುಂಜಾನೆಯ ಸಮಯದಲ್ಲಿ ಉದನೂರ ಕ್ಲಾಸ್ ಬಳಿ ವಿಶೇಷ ಸನ್ಮಾನ ಮಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಅಲ್ಲಮಪ್ರಭು ಪಾಟೀಲ ನೆಲೋಗಿ ಮಾಜಿ ವಿಧಾನ ಪರಿಷತ್ ಸದಸ್ಯರು ವಹಿಸಿದ್ದರು. ವಿಶೇಷ ಅತಿಥಿಗಳಾಗಿ ರಾಜು ನವಲದಿಗಿ, ತುಕರಾಮ ಪಾಟೀಲ, ಮಹಾತೇಶ ಪಾಟೀಲ, ಶ್ಯಾಮ್ ನಾಟೀಕರ್ ಆಗಮಿಸಿದ್ದರು. ಗೆಳೆಯರ ಬಳಗದಿಂದ ಹಣಮಂತರಾಯಗೌಡ ಮತ್ತು ಬಸವರಾಜ ಮರತೂರ ಸನ್ಮಾನ ನೇರ ವಹಿಸಿದ್ದರು. ಸ್ವಾಗತ ಶಿವುಕುಮಾರ ಬಿದರಿ, ಕಾರ್ಯಕ್ರಮದ ನಿರೂಪಣೆ ಹುಲ್ಲಕಂಠರಾಯ ಅರಳಗುಂಡಗಿ ನಡೆಸಿಕೊಟ್ಟರು.

ಪ್ರಮುಖ ಗಣ್ಯರಾದ ದೇವಿಂದ್ರಪ್ಪ ಮರತೂರ, ಶಿವಶರಣಪ್ಪ ಕೋಬಾಳ, ಎಂ.ಕೆ.ಪಾಟೀಲ, ವಸಂತ ನರಭೋಳ, ನೀಲಕಂಠ ಅವಂಟಿ, ಸಂಗನಗೌಡ ಪಾಟೀಲ, ವೆಂಕಟೇಶ ನಿರಡಗಿ, ಶಾಂತಪ್ಪ ನಿಂಬಾಳ, ದೇವಿಂದ್ರ ನಂದಿಕೂರ, ದೇಸಾಯಿ, ದೊಡ್ಡಮನಿ, ಶಿರರೆಡ್ಡಿ, ಮಲ್ಲಿಕಾರ್ಜುನ ಅಜಗೊಂಡ, ಶರಣಪ್ಪ ಅಂದಾನಿ, ನಿಂಗಪ್ಪ ಪೂಜಾರಿ, ಖಾಜಾ ಪಟೇಲ್, ಕೋರೆ ವಕೀಲರು, ಲಕ್ಷ್ಮಪುತ್ರ, ಜಮಾದಾರ, ದೇವಿಂದ್ರ ಜಮಾದಾರ, ರವಿ ಪಾಟೀಲ, ಶೈಲ್ ಬಳ್ಳೂರಗಿ, ಜಗಶೆಟ್ಟಿ, ಮಲ್ಲಿಕಾರ್ಜುನ ದುತ್ತರಘಾಂವ, ಮಂಗಾ, ಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here