ರೈತ ಆತ್ಮಹತ್ಯೆ ಪರಿಹಾರದಡಿ 5 ಲಕ್ಷ ರೂ.ಗಳ ಪರಿಹಾರಧನದ ಪ್ರಮಾಣಪತ್ರ ವಿತರಣೆ

0
24

ಕಲಬುರಗಿ: ತಾಲೂಕಿನ ಧರ್ಮಾಪೂರ ಗ್ರಾಮದಲ್ಲಿ ಇತ್ತೀಚಿಗೆ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಶರಣಬಸಪ್ಪ ರೋಜಾ ಇವರ ಕುಟುಂಬದವರಿಗೆ ಕೃಷಿ ಇಲಾಖೆಯಿಂದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮುಡ ಅವರು ಮಂಗಳವಾರ ಅವರ ಪತ್ನಿಯಾದ ಗೋದಾವರಿ ಅವರಿಗೆ ಸಾಂತ್ವನ ಹೇಳಿ, ರೈತ ಆತ್ಮಹತ್ಯೆ ಪರಿಹಾರದಡಿ 5,00,000 ರೂ. ಗಳ ಪರಿಹಾರಧನದ ಪ್ರಮಾಣ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಗ್ರಾಮದ ಮುಖಂಡರಾದ ನಾಗರಾಜ ಕಲ್ಲಾ, ಶಿವಪುತ್ರಪ್ಪ ಪಾಟೀಲ, ಅಶೋಕ ಪಾಟೀಲ, ಬಸವರಾಜ ದಿಗ್ಗಾಂವ, ರೇವಣಯ್ಯ ಮಠಪತಿ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here