ಗುರು-ಶಿಷ್ಯರ ಸಂಬಂಧ ನೀರು ಮತ್ತು ಗೋಡೆಯಂತೆ

0
88
ಬಂದಾ ನವಾಜ್ ಸಂಚಿಕೆ 2
  • ಸಾಜಿದ್ ಅಲಿ

ಪ್ರಸಿದ್ಧ ಸೂಫಿ ಸಂತರಾದ ಹಜರತ್ ಖಾಜಾ ಬಂದಾ ನವಾಜ್ ಗೆಸುದರಾಜ್(ರ.ಅ) ಅವರು ಶೆಯರೆ ಮೊಹಮ್ಮದಿ ಎಂಬ ಪುಸ್ತಕದಲ್ಲಿ ಗುರು ಶಿಷ್ಯರ ಸಂಭಂದ ವಿಶ್ಲೇಷಣೆ ಮಾಡಲಾಗಿದೆ.

ಸೃಷ್ಠಿಕರ್ತನನ್ನು ಕಾಣಲು ಬಯಸಿದವರು ಗುರುಗಳ ಮನಸ್ಸಲ್ಲಿ ಕಾಣಬಹುದು, ಗುರುಗಳು ತನ್ನ ದೈವವನ್ನುಶಿಷ್ಯನಲ್ಲಿ ಕಾಣುತ್ತಾನೆ. ಗುರು-ಶಿಷ್ಯರ ಇಬ್ಬರ ಸಂಬಂಧ ನೀರು ಮತ್ತು  ಗೋಡೆಯಂತೆಯಾಗಿದೆ.

Contact Your\'s Advertisement; 9902492681

ನೀರಿಲ್ಲಿ ಸೂರ್ಯನ ಬಿಂಬ ನೇರವಾಗಿ ಬಿಳುತ್ತದೆ. ಆದರೆ ಗೋಡೆಯ ಮೇಲೆ ಬಿಳುವುದಿಲ್ಲ. ಆದರೆ ಗೊಡೆಯನ್ನು ನೀರಿನ ಜೊತೆ ಇಟ್ಟಿದರೆ?

ಪ್ರೀತಿಯ ಕಾರಣದಿಂದ ಸೃಷ್ಠಿಕರ್ತ ದೈವ ಈ ಸೃಷ್ಠಿಯನ್ನುತಯಾರಿಸಿದ, ಪ್ರೀತಿಯಿಂದಾಗಿ ಆಕಾಶವನ್ನು ನಿಲ್ಲಿಸಿದ, ಪ್ರೀತಿಯ ಕಾರಣದಿಂದಾಗಿಯೇ ಸಮುದ್ರಗಳಲ್ಲಿ ಅಲೆಗಳು ಏಳು ಪ್ರೇರೇಪಿಸಿದ, ದೈವ ಕರ್ತರನ ಆಪಾರ ಪ್ರೀತಿಯ ಫಲವೇ ಹಸಿರು ಕಾಂತಿಯ ಮೂಲಕ ಬ್ರಹ್ಮಾಂಡ ಸೃಷ್ಠಿಸಲಾಯಿತು. ಪ್ರೀತಿಯ ಫಲವೇ ಸಕಲ ಜೀವ ಮತ್ತು ಜೀವಾಂಶಗಳ ತಕಲಿಕ್ (ಸೃಷ್ಠಿ) ಮಾಡಲಾಯಿತು.

ಮನಸ್ಸಿನ ಪವಿತ್ರತೆಯಿಂದ ಕುಡಿದ ಪ್ರೀತಿಯ ಪ್ರಾರ್ಥನೆ, ಪೊಜೆ, ಭಕ್ತಿಯಿಂದ ದೈವವನ್ನು ಕಾಣಲು ಸಾಧ್ಯವೆಂದು ವ್ಯಾಖ್ಯಾನಿಸಲಾಗಿದೆ.

ಆತ್ಮದ ಪವಿತ್ರತೆ ಹೇಗೆ ಕಾಪಡಲು ಸಾಧ್ಯ ಎಂಬುದಕ್ಕೆ ನಾಲ್ಕು ಅಂಶಗಳ ನಿಯಂತ್ರ ಬಹಾಳ ಮುಖ್ಯವಾಗಿದೆ

  1. ಕಡಿಮೆ ತಿನ್ನುವುದು
  2. ಕಡಿಮೆ ಮಲಗುವುದು
  3. ಕಮ್ಮಿ ಮಾತನಾಡುವುದು
  4. ಕಮ್ಮಿ ಜನರೊಂದಿಗೆ ಬಾಂಧಾವ್ಯ ಬೆಳಸುವುದು.

ಈ ನಾಲ್ಕು ಅಂಶಗಳ ನಿಯಂತ್ರಣದಿಂದ ಆತ್ಮದ ಪವಿತ್ರೆ ಕಾಪಾಡಿಕೊಳಲು ಸಾಧ್ಯವಾಗುತ್ತದೆ ಎಂದು ಬಂದಾ ನವಾಜ್ ಅವರ ಅನುಯಾಯಿ ಶಯೆರೆ ಮೊಹಮ್ಮದಿ ಎಂಬ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಇಂತಹ ಹಲವು ಪುಸ್ತಕಗಳು ಖಾಜಾ ಬಂದಾ ನವಾಜ್ ದರ್ಗಾದ ಮುಖ್ಯದ್ವಾರದಲ್ಲಿ ಇರುವ ಬುಕ್ ಸೆಂಟರ್ ಮತ್ತು ಕೆಬಿಎನ್ ಲ್ಯಾಬರೇರಿಯಲ್ಲಿ ಪಡೆಯಬಹುದಾಗಿದೆ.

ಬಂದಾ ನವಾಜ್ ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸುವರಿಗೆ ಬಂದಾ ನವಾಜ್ ಸಮುದ್ರ ಇದ್ದಂತೆ, ಸಮುದ್ರದ ಆಳ ಅಳೆಯಲು ಹೇಗೆ ಸಾಧ್ಯವಿಲ್ಲವೋ ಅವರ ಜ್ಞಾನದ ಸಮುದ್ರದ ಆಳ ತಿಳಿದುಕೊಳಲು ಸಾಧ್ಯವಾಗದು, ಆದರೆ ಅವರಿಂದ ಜ್ಞಾನ ಪಡೆಯಲು ಹಂಬಲಿಸುವ ಹೃದಯವಂತರಿಗೆ ಜ್ಞಾನದ ಬೆಳಕು ಕರುಣಿಸದೆ ಇರುವುದಿಲ. – ಪ್ರೊ. ಅಬ್ದುಲ್ ಹಮೀದ್ ಅಕ್ಬರ್, ಕೆ.ಬಿ.ಎನ್ ವಿಶ್ವ ವಿದ್ಯಾಲಯದ ಉರ್ದು ವಿಭಾಗದ ನಿರ್ದೇಶಕರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here