ತೈಲ ಬೆಲೆ ಏರಿಕೆ ಖಂಡಿಸಿ ಸುರಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

0
16

ಸುರಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಬೆಲೆ ಪ್ರತಿ ಬ್ಯಾರಲ್‌ಗೆ ೪೩ ಯುಎಸ್ ಡಾಲರ್‌ನ ಆಸುಪಾಸಿನಲ್ಲಿದ್ದರು ನಮ್ಮ ದೇಶದಲ್ಲಿ ಮಾತ್ರ ಇನ್ನು ತೈಲ ಬೆಲೆ ಇಳಿಕೆ ಕಂಡಿಲ್ಲಾ ಸತತವಾಗಿ ಕಳೆದ ಆರು ವರ್ಷಗಳಿಂದ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಇಳಿಕೆ ಮಾಡುವುದನ್ನು ಬಿಟ್ಟು ಪದೆ ಪದೆ ಬೆಲೆ ಏರಿಕೆಮಾಡುತ್ತಿದೆ ಇದರಿಂದ ಜನರು ದುಡಿಮೆಯ ಅರ್ಧಭಾಗದಷ್ಟು ಬರಿ ಪೆಟ್ರೋಲ ಮತ್ತು ಡೀಸಲಗಾಗಿ ನೀಡುವ ಪರಿಸ್ಥಿತಿ ಎದುರಾಗಿದೆ ತಕ್ಷಣವೆ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಕಡಿಮೆಗೊಳಿಸಬೇಕು ಎಂದು ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಹಶಿಲ್ದಾರ ಕಛೇರಿ ಮುಂಭಾಗದಲ್ಲಿ ಗುರುವಾರ ತಾಲೂಕು ಬ್ಲಾಕ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಅವರು ಕರೊನಾ ಸೊಂಕಿನಿಂದಾಗಿ ಕಳೆದ ಕೆಲತಿಂಗಳು ಇಡಿ ದೇಶವೆ ಲಾಕ್ ಡೌನಾಗಿ ಜನರು ಒಂದು ದಿನದ ದುಡಿಮೆಗೆ ಕಷ್ಟಪಡುತ್ತಿದ್ದಾರೆ ಇತಂಹ ಸಮಯದಲ್ಲಿ ಕೇಂದ್ರ ಸರ್ಕಾರ ಬಡ ಜನತೆಯ ನೆರವಿಗೆ ಬಂದು ಅವರ ಕಷ್ಟಕ್ಕೆ ಸ್ಪಂದಿಸಬೇಕಾಗಿತ್ತು ಆದರೆ ಸರ್ಕಾರವು ಪ್ರತಿ ದಿನವು ತೈಲ ಬೆಲೆಯನ್ನು ಏರಿಕೆ ಮಾಡಿ ಇತಂಹ ವಿಷಮ ಪರಿಸ್ಥಿತಿಯಲ್ಲೂ ಜನರ ಜೇಬಿಗೆ ಕತ್ತರಿಹಾಕುವ ಕೆಲಸ ಮಾಡುತ್ತಿರುವುದನ್ನು ಖಂಡಿಸಿದರು.

Contact Your\'s Advertisement; 9902492681

ಪ್ರತಿಭಟನೆಯ ಆರಂಭದಲ್ಲಿ ಕೇಂದ್ರ ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶಿಲ್ದಾರ ನಿಂಗಣ್ಣ ಬಿರಾದರ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶಕೀಲ ಅಹ್ಮದ್, ಮಹಿಬೂಬು ಸಾಬ, ಮುಖಂಡರಾದ ವೆಂಕಟರೆಡ್ಡಿ ಬೊವಿ, ವೆಂಕಟೇಶ ಸತ್ಯಂಪೆಟ, ಮಾಳಪ್ಪ ಕಿರದಳ್ಳಿ, ದಾವುದ್ ಪಠಾಣ, ಶರಣು ಸಾಹುಕಾರ ಕಳ್ಳಿಮನಿ, ಸಂಗಣ್ಣಗೌಡ ಪಾಟೀಲ್, ಮಹ್ಮದ್ ಮೌಲಾ, ಸಿದ್ರಾಮ ಎಲಿಗಾರ, ಜಹೀರ ರಂಗಂಪೇಟ, ಶರೀಫ ಅಹ್ಮದ್ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here