ಕೊರೋನಾ ಮಹಾಮಾರಿಗೆ ಸಾಮಾಜಿಕ ಅಂತರವೆ ಮದ್ದು: ಡಾ:ಚಂದ್ರಶೇಖರ್ ಸುಬೇದಾರ

0
62

ಶಹಾಪುರ : ವಿಪರೀತವಾಗಿ ದಿನದಿಂದ ದಿನಕ್ಕೆ ಹಬ್ಬುತ್ತಿರುವ ಕರೋನಾ ಮಹಾಮಾರಿ ಸೊಂಕಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೆ ಮದ್ದು ಎಂದು ಶಹಾಪುರದ ಖ್ಯಾತ ವೈದ್ಯರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಡಾ: ಚಂದ್ರಶೇಖರ ಸುಬೇದಾರ ಹೇಳಿದರು.

ಭಾರತೀಯ ಜನತಾ ಪಕ್ಷದ ಶಹಾಪುರ ಮಂಡಲ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ಕೊರೋನಾ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಪ್ರತಿಯೊಬ್ಬರು ಸರ್ಕಾರದ ಆದೇಶಗಳನ್ನು ಪಾಲಿಸಿ ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಬೇಕು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬಾರದು,ಬಂದರೂ ಗುಂಪಾಗಿ ಸೇರಬಾರದು ಎಂದು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ,ಹಿರಿಯ ಮುಖಂಡರಾದ ರಾಜಶೇಖರ ನಗನೂರು,ಯಲ್ಲಯ್ಯ ನಾಯಕ ವನದುರ್ಗ, ಅಡಿವಪ್ಪ ಜಾಕಾ, ಹಾಗೂ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here