ತುಂಬಿ ತುಳುಕುತ್ತಿರುವ ಕೃಷ್ಣಾ ನದಿ.

0
36

ಶಹಾಪುರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗುತ್ತಿದ್ದು ಆದ್ದರಿಂದ ಕೊಲ್ಲೂರು ಹತ್ತಿರವಿರುವ ಕೃಷ್ಣಾ ನದಿ ತುಂಬಿ ತುಳುಕುತ್ತಿದೆ.

ನದಿಯ ನೀರು ಸೇತುವೆ ಮೇಲೆ ಬರಲು ಇನ್ನಷ್ಟು ಸ್ವಲ್ಪ ಮಾತ್ರ ಬಾಕಿ ಉಳಿದಿದೆ,ಮತ್ತಷ್ಟು ಮಳೆ ಬಂದರೆ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆಗಳಿದ್ದು ನದಿ ತಟದ ಗ್ರಾಮಸ್ಥರು ಜಾಗರೂಕತೆ ವಹಿಸಬೇಕಾಗಿದೆ.

Contact Your\'s Advertisement; 9902492681

ಪ್ರತಿ ಬಾರಿ ಜೋರು ಮಳೆ ಬಂದಾಗ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ಇಲ್ಲಿ ಬಹುದೊಡ್ಡ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಯುವ ಮುಖಂಡ ಶಿವರೆಡ್ಡಿ ಪಾಟೀಲ್ ಕೋಳೂರು ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here