ಅರುಣಕುಮಾರ ಪಾಟೀಲ್ ಅಭಿಮಾನಿ ಬಳಗದಿಂದ ನೀರು ಶುದ್ಧಿಕರಿಸುವ ಯಂತ್ರ ವಿತರಣೆ

0
22

ಕಲಬುರಗಿ: ೩೭೧ (ಜೆ) ಕಲಂ ರೂವಾರಿ, ಕೇಂದ್ರ ಮಾಜಿ ಸಚಿವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ, ರಾಜ್ಯಸಭೆ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಅರುಣಕುಮಾರ ಪಾಟೀಲ್ ಅಭಿಮಾನಿ ಬಳಗ ಮತ್ತು ಸ್ನೇಹಿತರಿಂದ ನಗರದ  ಸೈಯದ್ ಚಿಂಚೋಳಿ ರಿಂಗ್ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ದಾಶ್ರಮಕ್ಕೆ ಉಚಿತವಾಗಿ ನೀರು ಶುದ್ಧಿಕರಿಸುವ ಯಂತ್ರ, ಮಾಸ್ಕ್,ಸ್ಯಾನೆಟೈಜರ್‌ಗಳನ್ನು ವಿತರಿಸಲಾಯಿತು. ಕಾಂಗ್ರೆಸ ಪಕ್ಷದ ಯುವ ನಾಯಕ ಹಾಗೂ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಎಸ್.ಪಾಟೀಲ್ ಕೊಡಲಹಂಗರಗಾ, ಅಶೋಕ ವೀರನಾಯಕ, ಜಗನ್ನಾಥ ಪಟ್ಟಣಶೇಟ್ಟಿ, ಶಂಕರಲಿಂಗ, ಮಹೇಶ. ಮಲ್ಲಿಕಾರ್ಜುನ, ಸಚಿನ ಶಿರವಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here