Monday, July 15, 2024
ಮನೆಬಿಸಿ ಬಿಸಿ ಸುದ್ದಿಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮೇಲಿನ ಮೊಕದ್ದಮೆ ರದ್ದು ಮಾಡಲು ಪ್ರಗತಿಪರರ ಆಗ್ರಹ

ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮೇಲಿನ ಮೊಕದ್ದಮೆ ರದ್ದು ಮಾಡಲು ಪ್ರಗತಿಪರರ ಆಗ್ರಹ

ಸುರಪುರ: ಪತ್ರಕರ್ತ ಹಾಗೂ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಅವರ ಮೇಲೆ ದಾಖಲಿಸಲಾದ ಮೊಕದ್ದಮೆಯನ್ನು ಹಿಂಪಡೆಯಬೇಕು ಹಾಗೂ ಪ್ರಗತಿಪರ ಮೇಲಿನ ದಬ್ಬಾಳಿಕೆ ಕಡಿವಾಣ ಹಾಕುವಂತೆ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ತಹಸಿಲ್ ಕಚೇರಿ ಮುಂದೆ ಸೇರಿದ ಅನೇಕ ಜನ ಪ್ರತಿಭಟನಾಕಾರರು ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಅವರ ಮೇಲೆ ದಾಖಲಿಸಲಾದ ಅದನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಹೈಮದ್ ಪಠಾಣ್ ಮಾತನಾಡಿ, ವಿಶ್ವರಾಧ್ಯ ಸತ್ಯಂಪೇಟೆ ಅವರು ಈ ನಾಡು ಕಂಡ ವೈಚಾರಿಕ ನಿಲುವಿನ ಸಾಹಿತಿಯಾಗಿದ್ದು.ಸದಾಕಾಲ ಸತ್ಯ ಮತ್ತು ನ್ಯಾಯದ ಪರವಾಗಿ ತಮ್ಮ ಲೇಖನಿಯನ್ನು ಬಳಸುವವರು ಇಂತಹ ಸಮಾಜಮುಖಿ ಪತ್ರಕರ್ತನ ಮೇಲೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಯಲ್ಲಿ ವಿಶ್ವೇಶ್ವರಯ್ಯ ಸ್ವಾಮೀಜಿಯ ಕುರಿತು ವೈಚಾರಿಕವಾದ ಲೇಖನವನ್ನು ಬರೆದ ಕಾರಣದಿಂದ ಅವರ ಮೇಲೆ ಮೊಕದ್ದಮೆಯನ್ನು ದಾಖಲಿಸಲಾಗಿದೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆಯಾಗಿದೆ. ಘಟನೆಯನ್ನು ಸಾಮೂಹಿಕ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಹಾಗೂ ಸರಕಾರ ಕೂಡಲೇ ಈ ಮೊಕದ್ದಮೆಯನ್ನು ರದ್ದುಪಡಿಸಬೇಕು ಮತ್ತು ರಾಜ್ಯದಲ್ಲಿನ ಪ್ರಗತಿಪರ ಮತ್ತು ವೈಚಾರಿಕ ಮೇಲೆ ನಡೆಯುವ ಇಂತಹ ದಬ್ಬಾಳಿಕೆಗಳಿಗೆ ಕಡಿವಾಣ ಹಾಕುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ ಮುಖ್ಯಮಂತ್ರಿಯವರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರರಾದ ದೇವಿಂದ್ರಪ್ಪ ಪತ್ತಾರ್ ಮಾಳಪ್ಪ ಕಿರದಳ್ಳಿ ರಾಜು ಕುಂಬಾರ ನಿಂಗಣ್ಣ ಗೋನಾಲ್ ರಾಹುಲ್ ಹುಲಿಮನಿ ವಿಶ್ವನಾಥ ಹೊಸಮನಿ ಬಸವರಾಜ್ ಮುಷ್ಠಳ್ಳಿ ಕನಕಾಚಲ ಯಡಿಯಾಪೂರ ಹುಲಗಪ್ಪ ದೇವತ್ಕಲ್ ಮೌನೇಶ ಹುಣಸಿಹೊಳೆ ಮಾನಪ್ಪ ಶರಣು ತಳವಾಗರಗೇರಾ ಚಂದಪ್ಪ ಪಂಚಮ್ ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular