ನಿವೃತ್ತಿ ಹೊಂದಿದ ವೈದ್ಯಾಧಿಕಾರಿ ಡಾ.ಪರಮೇಶ್ವರ.ಎಮ್.ಸಜ್ಜನಗೆ ಬೀಳ್ಕೊಡುಗೆ

0
127

ಶಹಾಬಾದ:ನಗರದ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಪರಮೇಶ್ವರ.ಎಮ್.ಸಜ್ಜನ್ ಅವರ ವಯೋನಿವೃತ್ತಿ ಹೊಂದಿದ ನಿಮಿತ್ತ ಅವರನ್ನು ಶುಕ್ರವಾರ ತಾಲೂಕಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ನೌಕರರ ಸಂಘದ್ಷಧ್ಯಕ್ಷ ಈರಣ್ಣ ಕೆಂಭಾವಿ ಹಾಗೂ ಗೌರವಾಧ್ಯಕ್ಷ ಸಂತೋಷ ಸಲಗರ ಮಾತನಾಡಿ, ಡಾ.ಸಜ್ಜನ್ ಎರಡು ದಶಕಗಳಿಂದ ಉತ್ತಮ ಸೇವೆ ನೀಡಿದಲ್ಲದೇ ಎಲ್ಲಾ ಸಿಬ್ಬಂದಿಗಳೊಂದಿಗೆ ಸೌಜನ್ಯದಿಂದ ಇರುತ್ತಿದ್ದರಿಂದ ಎಲ್ಲರ ಪ್ರೀತಿ ಪಾತ್ರಕ್ಕೆ ಒಳಗಾಗಿದ್ದರು. ಎಷ್ಟೇ ಒತ್ತಡದಲ್ಲಿದ್ದರೂ ಯಾರೊಂದಿಗೆ ಏರು ಧ್ವನಿಯಲ್ಲಿ ಮಾತನಾಡುತ್ತಿರಲಿಲ್ಲ.ತಮ್ಮ ಹುದ್ದೆಯ ಗತ್ತು ದೌಲತ್ತನ್ನು ಎಂದಿಗೂ ತೋರಿಸದೇ ಸರಳವಾಗಿದ್ದರು ಎಂದು ಹೇಳಿದರು.
ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶಶಿಕಾಂತ ಭರಣಿ, ಖಜಾಂಚಿ ರಮೇಶ ಕುಲಕರ್ಣಿ, ಮೋಹನ ಗಾಯಕವಾಡ,ಹೆಚ್.ವಾಯ್.ರಡ್ಡೇರ್,ಆನಂದ, ಜಗನ್ನಾತ.ಎಸ್.ಹೆಚ್, ಅಮರೇಶ ಇಟಗಿಕರ್,ಹಣಮಂತ ಲಾಳಸಂಗಿ, ಶರಣು, ರಾಹುಲ್ ಸೇರಿದಂತೆ ಅನೇಕ ಜನರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here