ಕಲಬುರಗಿ: ನಗರದ ಉತ್ತರ ಮತಕ್ಷೇತ್ರದ ವಾರ್ಡ್ ನಂ.29 ರಲ್ಲಿ ದರ್ಶನಾಪುರ ಜಿಡಿಎ ಲೇಔಟ್ನಲ್ಲಿ ಮಹಾನಗರ ಪಾಲಿಕೆ ಅನುದಾನದಲ್ಲಿ ಬಸವೇಶ್ವರ ಶಾಲೆಯ ಮುಂದುಡಗೆ 10 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಹಾಗೂ 7.ಲಕ್ಷ ಉದ್ಯಾನವನದ ಅಭಿವೃದ್ಧಿ ಮತ್ತು ಕೊಳವೆ ಬಾವಿ, ಬಸವೇಶ್ವರ ಕಾಲನಿಯಿಂದ ಸಂತ್ರಸವಾಡಿ ವರೆಗೆ 5 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಒಟ್ಟು 23.ಲಕ್ಷ ರೂ.ಗಳ ವಿವಿಧ ಕಾಮಗಾರಿಗೆ ಶಾಸಕಿ ಕನೀಜ್ ಫಾತಿಮಾ ಅವರು ಗುರುವಾರ ಚಾಲನೆ ನೀಡಿದರು.
ಚುನಾವಣೆಯಲ್ಲಿ ನೀಡಿದ ಭರವಸೆಯಂತೆ, ಎಲ್ಲಾ ಬೇಡಿಕೆಗಳು ಹಂತ, ಹಂತವಾಗಿ ಈಡೇರಿಸಲು ಬದ್ಧವಾಗಿದ್ದು, ಈ ಕಾಮಗಾರಿಯ ಗುಣಮಟ್ಟತೆ ಕಾಪಾಡಿಕೊಳ್ಳಲು ಬಡಾವಣೆಯ ಜನರು ಕಾಳಜಿ ವಹಿಸಬೇಕು ಎಂದು ಫಾತಿಮಾ ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಫರಾಜ್ ಉಲ್ ಇಸ್ಲಾಂ, ಮಾಜಿ ಪಾಲಿಕೆ ಸದಸ್ಯ ಮಲಿಕಾರ್ಜುನ ಎಸ್.ಟೆಂಗಳಿ, ಆದಿಲ್ ಸುಲೇಮಾನ ಸೇಠ್, ಮಜರ ಆಲ್ಂ ಖಾನ್, ತುಕಾರಾಮ ಕೊಳ್ಳೂರ, ಗುತ್ತೇದಾರರಾದ ದೇವರಾಜ ಪೂಜಾರಿ, ಮುನಾವರ್ ಪಟೇಲ್, ಶೋಯಬ್ ಖಾನ್ ಹಾಗೂ ಬಡಾವಣೆಯ ಹಿರಿಯ ಮುಖಂಡರು ಇದ್ದರು.