ಸಂಕಷ್ಠದಲ್ಲಿರುವ ಕೈಮಗ್ಗ ನೇಕಾರರ ಕುಟುಂಬಗಳಿಗೆ ವಿಶೇಷ ಅನುದಾನಕ್ಕಾಗಿ ಆಗ್ರಹ

0
81

ಕಲಬುರಗಿ: ೧೧ನೇ ಶತಮಾನದಿಂದ ಹರಿದು ಹಂಚಿ ಹೋದ ನೇಕಾರರ ಸಮಾಜವನ್ನು ನ್ಯೆಯಿದು ಒಗ್ಗೂಡಿಸಿದ ಕೀರ್ತಿ ದೇವರ ದಾಸಿಮಾರ್ಯ ರವರಿಗೆ  ಸಲ್ಲುತ್ತದೆ ಶತ ಶತಮಾನದಿಂದಲು ಸಮಾಜದ ಮಾನ ಕಾಪಾಡಿದ ಶ್ರೇಯಸ್ಸು ನೇಕಾರರ ಸಮಾಜಕ್ಕೆ ಸಲ್ಲುತ್ತದೆ ಎಂದು ಅರಣ್ಯಾಧಿಕಾರಿಗಳಾದ ಡಾ. ರಮೇಶ ಮಾಳಾ ಹೇಳಿದರು.

ನಗರದ ಮಕ್ತಂಪೂರ ರಾಷ್ಟ್ರೀಯ ಕೈಮಗ್ಗ ನೇಕಾರರ ಕಛೇರಿಯಲ್ಲಿ  6ನೇ ರಾಷ್ಟ್ರೀಯ ಕೈಮಗ್ಗ ನೇಕಾರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ರೈತ ಮತ್ತು ನೇಕಾರ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ಹೇಳುತ್ತಿರುವ ಅನೇಕ ಸರ್ಕಾರಗಳು ಇಲ್ಲಿಯವರೆಗೆ ರೈತರು ಮತ್ತು ನೇಕಾರರಿಗೆ ಸಮಾನ ಅವಕಾಶ ನೀಡದೆ ಇರುವುದು ವಿಷಾದನಿಯ ಎನ್ನುತ್ತ ಒಬ್ಬ ರೈತ ಸತ್ತರೆ ಕನಿಷ್ಠ ೫ ಲಕ್ಷ ರೂಪಾಯಿ ಅನುದಾನ ನೀಡುವ ಸರ್ಕಾರ ಇವತ್ತು ಮಹಾಮಾರಿ ಕೋರೊನಾ ವೈರಸ್‌ನಿಂದ  ಇಲ್ಲಿಯವರೆಗೆ ಸುಮಾರು ೧೦ ಜನ ನೇಕಾರರು ಸಾವಿಗಿಡಾಗಿದ್ದಾರೆ ಸರ್ಕಾರ ಆದಷ್ಟು ಬೇಗನೆ ಮುಂದಿನ ದಿನಗಳಲ್ಲಾದರೂ ಮೃತ ನೇಕಾರರ ಕುಟುಂಬಗಳಿಗೆ ೧೧ನೇ ಶತಮಾನದಿಂದ ಸಮಾಜದ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವಂತ ದೇವರ ದಾಸಿಮಾರ್ಯ ನವರು ಸಾಹಿತ್ಯ ಸಮಾಜಕ್ಕೆ ನೀಡಿರುವ ಕೊಡುಗೆ ನೆನಪಿಸುತ್ತ ಕನಿಷ್ಠ ೧೧ ಲಕ್ಷ ರೂ. ಆದರು ನೇಕಾರರ ಮೃತ ಕುಟುಂಬಕ್ಕೆ ನೀಡಬೇಕೆಂದು ವಚನೋತ್ಸವ  ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷರು ಹಾಗೂ ನ್ಯಾಯವಾದಿಗಳು ಶಿವರಾಜ ಅಂಡಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸರಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಾದ ಚಂದ್ರಶೇಖರ ಸುಲ್ತಾನಪೂರ, ಉಪನ್ಯಾಸಕರಾದ ಹಣಮಂತರಾವ ಬಿ ಪಾಟೀಲ ಮಾತನಾಡಿದರು. ಬ್ರಹ್ಮನಠ ಮಕ್ತಂಪೂರ ಮ.ನಿ.ಪ್ರ ಶ್ರೀ ಶಿವಾನಂದ ಮಹಾಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಸಮಾಜದ ಅಧ್ಯಕ್ಷರಾದ ಅಣ್ಣಾರಾಯ ಕುಣಿಕೇರಿ ಪ್ರಸ್ತಾವಿಕವಾಗಿ ಮಾತನಾಡಿದರು ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ ಸ್ವಾಗತಿಸಿದರು, ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಜೆ. ವಿನೋದಕುಮಾರ ರವರು ನಿರೂಪಿಸಿದರು. ಕೊನೆಯಲ್ಲಿ ರೇವಣಸಿದ್ದಪ್ಪ ಗಡ್ಡದ ವಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ನೇಕಾರ ರಕ್ಷಣಾ ವೇದಿಕೆಯ ಭೀಮಾಶಂಕರ ರಾಜಗುಂಡೆ ಛಾಯಾಗ್ರಾಹಕ  ರಾಜು ಕೋಷ್ಠಿ, ಶಂಕರ ನನ್ನಾ, ಚಂದ್ರಕಾಂತ ಇಂಗಳಿಗಿ, ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here