‘ಹಾರುವ ಸುಳ್ಳುಗಳು’  ಪುಸ್ತಕ ಬಿಡುಗಡೆ

0
127

ಶಿವಮೊಗ್ಗ: ಇಂದು ಸಂವಿಧಾನ ಉಳಿವಿಗಾಗಿ ಕರ್ನಾಟಕದ ವತಿಯಿಂದ ಯೋಗೇಂದ್ರ ಯಾದವ್ ಅವರ ‘ಮೋದಿ ಆಡಳಿತದಲ್ಲಿ ರೈತ’ ಮತ್ತು ರವಿ ನಾಯರ್ ಅವರ ರಫೇಲ್ ಡೀಲ್ ಕುರಿತ  ‘ಹಾರುವ ಸುಳ್ಳುಗಳು’ ಎಂಬ ಪುಸ್ತಕಗಳನ್ನು ಶಿವಮೊಗ್ಗದ ಪತ್ರಿಕಾ ಭವನದಲ್ಲಿ  ಬಿಡುಗಡೆಗೊಳಿಸಲಾಯಿತು.

ಪುಸ್ತಕ ಬಿಡುಗಡೆಯನ್ನ ಶಿವಮೊಗ್ಗದ ಹಿರಿಯ ಸಮಾಜವಾದಿಗಳಾದಂತಹ ಕೆ. ಪುಟ್ಟಯ್ಯನವರು ನಡೆಸಿಕೊಟ್ಟು, ಈ ದೇಶಕ್ಕೆ ಎದುರಾಗುತ್ತಿರುವಂತಹ ಆತಂಕ, ಭವಿಷ್ಯದ ಬಗ್ಗೆ ಯುವಜನ ಬಹಳ ದಿಟ್ಟವಾದ ನಿಲುವನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಸರ್ವಾಧಿಕಾರಿ ಮೋದಿಗೆ ಭಾರತದ ಆಡಳಿತವನ್ನು ನೀಡಬಾರದು ಎನ್ನುವ ಮಾತುಗಳನ್ನು ಆಡಿದರು.

Contact Your\'s Advertisement; 9902492681

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ  DSS ನ ರಾಜ್ಯ ಸಂಚಾಲಕರಾದಂತಹ ಎಂ ಗುರುಮೂರ್ತಿ ಅವರು, ಜಮಾ ಅತೆ ಇಸ್ಲಾಮಿ ಹಿಂದ್ ನ ಜಿಲ್ಲಾ ಸಂಚಾಲಕರಾದ ಅಬ್ದುಲ್ ವಹಾಬ್, ಕೋಮುಸೌಹಾರ್ದ ವೇದಿಕೆಯ ಜಿಲ್ಲಾ ಕಾರ್ಯದರ್ಶಿಗಳಾದ ಕೆ.ಪಿ.ಶ್ರೀಪಾಲ್, ವಿವೇಕದ ಅಧ್ಯಕ್ಷರಾದ ಆರ್.ಕುಮಾರ್ ಅವರು, ವಿವೇಕದ ಕಾರ್ಯದರ್ಶಿಗಳಾದ ಡಿ.ಎಸ್.ಶಿವಕುಮಾರ್, ಪ್ರಗತಿಪರರಾದ ಕಿರಣ್, ಕೋಮುಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ ಕೆ.ಎಲ್.ಅಶೋಕ್ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here