ನಗರದ ಐತಿಹಾಸಿಕ ಸ್ಥಳಗಳನ್ನು ಸುವ್ಯವಸ್ಥೆಗೊಳಿಸುವಂತೆ ಆಗ್ರಹ

0
60

ಸುರಪುರ: ಸರ್ದಾರ ವಲ್ಲಭಾಯಿ ಪಟೇಲರ ಮೂರ್ತಿಯನ್ನು ದೇಶದಲ್ಲೆ ಪ್ರಥಮ ಬಾರಿಗೆ ಸ್ಥಾಪನೆಗೊಂಡಿದ್ದು ನಗರದಲ್ಲಿ ಇತಂಹ ಐತಿಹಾಸಿಕ ಮೂತಿ ಇಂದು ಬಿಡಾಡಿದನಗಳ ಹಾಗೂ ತ್ಯಾಜ್ಯವಸ್ತುಗಳನ್ನೇಸೆಯುವ ತಾಣವಾಗಿರುವುದು ದುರಾದೃಷ್ಟಕರವಾಗಿದೆ ಎಂದು ಸುರಪುರ ಐತಿಹಾಸಿಕ ಸ್ಥಳಗಳ ಪುನರ್ ನಿರ್ಮಾಣ ಹೋರಾಟಗಾರ ಅಧ್ಯಕ್ಷ ರಾಜಾ ಪಿಡ್ಡನಾಯಕ ಬೇಸರ ವ್ಯಕ್ತ ಪಡಿಸಿದರು.

ನಗರದ ನಗರಸಭೆ ಕಚೇರಿ ಎದುರುಗಡೆ ಹಮ್ಮಿಕೊಂಡಿದ್ದ ಪ್ರತಿಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಸುರಪುರ ನಗರವು ಒಂದು ಐತಿಹಾಸಿಕ ತಾಣವಾಗಿದೆ ಇಲ್ಲಿಯ ಸ್ಮಾರಕಗಳಿಗೆ ರಕ್ಷಣೆ ಇಲ್ಲದೆ ಸೂರಗುತ್ತಿವೆ ಸರ್ದಾರ ವಲ್ಲಭಾಯಿ ಪಟೇಲರ ಕಟ್ಟೆ ಹಾಗೂ ಟೈಲರ‍್ಸ ಮಂಜಿಲ, ಹಳೆದರಬಾರ, ೧೮೫೭ ರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮಡಿದ ವೀರ ಯೋಧ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ನೆನಪಿಗಾಗಿ ನಿರ್ಮಿಸಿದ ಅಶೋಕ ಸ್ಥಂಬದ ಸ್ಮಾರಕಗಳು ಕುಡಕರಿಗಾಗಿ ನಿರ್ಮಾಣವಾದಂತಾಗಿದೆ ಸಂಜೆಯಾದರೆ ಸಾಕು ಕುಡಕರು ಪುಂಡಪೂಕರಿಗಳು ದಾಂಧಲೆಯ ಬೀಡಾಗಿವೆ ಕೊಡಲೆ ಸರಕಾರ ಹಾಗೂ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಈಗಲಾದರು ಸ್ಮಾರಕಗಳನ್ನು ರಕ್ಷಿಸಿ ನಗರವನ್ನು ಪ್ರಕ್ಷಣೀಯ ಸ್ಥಳವನ್ನಾಗಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಪತ್ರವನ್ನು ನಗರಸಭೆ ಪೌರಾಯುಕ್ತ ಏಜಾಜ ಹುಸೇನ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ, ತಿಪ್ಪಣ ಪಾಟೀಲ, ಗುರುನಾಥ ರಡ್ಡಿ, ಶಾಂತು ತಳವಾರಗೇರಾ, ವೆಂಕಟೇಶನಾಯಕ ಜಲ್ಲಿಪಲ್ಲಿ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here