ಸುರೇಶ ಅಂಗಡಿ ನಿಧನಕ್ಕೆ ಬಿಜೆಪಿ ಶ್ರದ್ಧಾಂಜಲಿ

0
93

ಶಹಾಬಾದ:ತಮ್ಮ ಇಡೀ ಜೀವನವನ್ನೇ ಜನಸೇವೆಗಾಗಿ ಮೀಸಲಾಗಿಟ್ಟಿದ್ದ ಅಜಾತಶತ್ರುಮ ಸರಳಸಜ್ಜನಿಕೆಯ ರಾಜಕಾರಣಿ ರೇಲ್ವೆ ಖಾತೆ ಸಚಿವ ಸುರೇಶ ಅಂಗಡಿ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಿಜೆಪಿ ಮುಖಂಡ ಅನಿಲ ಬೋರಗಾಂವಕರ್ ಹೇಳಿದರು.

ಅವರು ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾದ ರೇಲ್ವೆ ಖಾತೆ ಸಚಿವ ಸುರೇಶ ಅಂಗಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಉತ್ತಮ ಸಂಸದರಾಗಿ ಹಾಗೂ ಸಚಿವರಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಯಾವುದೇ ಹಮ್ಮು ಬಿಮ್ಮುಗಳಿಲ್ಲದ ವ್ಯಕ್ತಿಯಾಗಿದ್ದರು.ರಾಜಕೀಯ ಕ್ಷೇತ್ರ ಹೊರತುಪಡಿಸಿ, ಶಿಕ್ಷಣ ಉದ್ಯಮದ ಜತೆಗೆ ಹಲವಾರು ಕ್ಷೇತ್ರಗಳಲ್ಲಿ ತೀವ್ರ ಕಳಕಳಿ ಮತ್ತು ಕಾಳಜಿ ಹೊಂದಿದ್ದರು.ಸುಮಾರು ನಾಲ್ಕು ಬಾರಿ ಸಂಸದರಾಗಿ ಜನಸ್ನೇಹಿ ರಾಜಕೀಯ ವಲಯದಲ್ಲಿ ಮಾದರಿಯಾಗಿದ್ದರು.ಬಿಜೆಪಿಗೆ ಗಟ್ಟಿಯಾದ ನೆಲೆ ಒದಗಿಸಿದ್ದ ಅಂಗಡಿಯವರ ಅಗಲಿಕೆ ತೀವ್ರ ದುಃಖ ಉಂಟು ಮಾಡಿದೆ ಎಂದರು.

ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಸೂರ್ಯಕಾಂತ ವಾರದ,ಸುಭಾಷ ಜಾಪೂರ, ಅರುಣ ಪಟ್ಟಣಕರ್,ಅಣ್ಣಪ್ಪ ದಸ್ತಾಪೂರ,ಯಲ್ಲಪ್ಪ ದಂಡಗುಲಕರ್,ನಿಂಗಣ್ಣ ಹುಳಗೋಳಕರ್,ಶ್ರೀಧರ ಜೋಷಿ, ಸಂಜಯ ಕೋರೆ, ರಾಜಶೇಖರ ಕೋಬಾಳ, ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಜಯಶ್ರೀ ಸೂಡಿ,ಬಸವರಾಜ ಬಿರಾದಾರ,ಸುನೀಲ ಕುಂಬಾರ, ಸಿದ್ರಾಮ ಕುಸಾಳೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here