ಭೂ ಮಂಜೂರಾತಿ ಸಮಿತಿ ನೇಮಕ: ಬಡ ರೈತರಿಗೆ ನ್ಯಾಯಕ್ಕಾಗಿ ಪ್ರತಿಭಟನೆ

0
104

ಜೇವರ್ಗಿ: ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಸುಮಾರು 60 ವರ್ಷಗಳಿಂದ ಗೈರಾಣಿ ಜಮೀನನ್ನು ನಂಬಿಕೊಂಡು ತಮ್ಮ ಕುಟುಂಬವನ್ನು ಸಾಧಿಸುತ್ತಿರುವ ಬಡ ರೈತರಿಗೆ ಸರಕಾರವು ನ್ಯಾಯ ಒದಗಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ತಾಲೂಕ ಸಂಚಾಲಕರಾದ ಸಿದ್ದರಾಮ ಕಟ್ಟಿ ಆಗ್ರಹಿಸಿದ್ದಾರೆ.

ತಾಲೂಕು ಆಡಳಿತ ಕಚೇರಿಯ ಮುಂದೆ ರೈತರ ಸಮುಖದಲ್ಲಿ ಪ್ರತಿಭಟನೆ ನಡೆಸಿದ ಸಮಿತಿ, ಅತಿವೃಷ್ಟಿಗೆ ರೈತರು ಮುಂಗಾರು ಬೆಳೆಗಳನ್ನು ಬೆಳೆದು ಕಂಗಾಲಾಗಿದ್ದಾರೆ. ಸರಕಾರ ಈ ಕುರಿತು ಪರಿಹಾರ ಯೋಜನೆಯನ್ನು ರೂಪಿಸಬೇಕು ಒತ್ತಾಯಿಸಿದರು.

Contact Your\'s Advertisement; 9902492681

ಸರಕಾರವು ಒಂದು ವರ್ಷ ಕಳೆದರು ಸಹ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಭೂಮಂಜೂರಾತಿ ಸಮಿತಿಯನ್ನು ರಚನೆ ಮಾಡಿರುವುದಿಲ್ಲ. ಸರಕಾರಿ ಜಮೀನಿಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ತಕ್ಷಣ ಸರ್ಕಾರದ ನಿಯಮಾನುಸಾರ ಸಾಗುವಳಿ ಚೀಟಿ ನೀಡಿ ಪಹಣಿ ಪತ್ರಿಕೆಯಲ್ಲಿ ಬರುವಂತೆ ಕ್ರಮವಹಿಸಬೇಕು. ಅಲ್ಲದೆ ಸಾಗುವಳಿ ಚೀಟಿ ಪಡೆದುಕೊಂಡ ರೈತರಿಗೆ ತಕ್ಷಣವೇ ಪಹಣಿ ನೀಡುವಂತೆ ತಶಿಲ್ದಾರ ರಿಗೆ ಸೂಚಿಸಬೇಕೆಂದು ಆಗ್ರಹಿಸಿದರು.

ಭೂ ಮಂಜೂರಾತಿ ಸಮಿತಿ ರಚನೆ ಮಾಡಲು ವಿಳಂಬವಾದರೆ ಅರ್ಜಿ ಸಲ್ಲಿಸಿದ ರೈತರಿಗೆ ತಸಿಲ್ದಾರ್ ಇವರ ಮೂಲಕವೇ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.

ಸರಕಾರ ಆಡಳಿತಕ್ಕೆ ಬರುವ ಮುಂಚೆ ರಾಜ್ಯದ ರೈತರ, ವಿದ್ಯಾರ್ಥಿಗಳ, ಕೂಲಿಕಾರ್ಮಿಕರ, ದಲಿತರ ಹಿಂದುಳಿದ ವರ್ಗದವರ ಹಾಗೂ ಅಲ್ಪಸಂಖ್ಯಾತರ ಶೋಷಿತರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಕೇವಲ ಗಗನ ಕುಸುಮವಾಗಿಯೇ ಉಳಿದಿದೆ.

ಸುಮಾರು ಅರವತ್ತು ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬಂದ ಭೂಹೀನ ಜನರಿಗೆ ಜಮೀನು ಹಕ್ಕುಪತ್ರಕ್ಕಾಗಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದೇವೆ ಆದರೆ ಹಿಂದಿ ಆಡಳಿತದಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳು ಸಹ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಹಕ್ಕುಪತ್ರಗಳನ್ನು ಕೊಡುತ್ತೇವೆ ಎನ್ನುವ ಸುಳ್ಳು ಭರವಸೆಗಳನ್ನು ಬಿಟ್ಟರೆ ಯಾವುದೇ ಕೆಲಸವನ್ನು ಮಾಡಿಲ್ಲ.
ಕೂಡಲೇ ಸರಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೋರಾಟ ರೂಪಿಸಲಾಗುತ್ತದೆ ಎಂದು ಸಂಘಟನೆ ವತಿಯಿಂದ ಎಚ್ಚರಿಸಲಾಯಿತು.

ಪ್ರತಿಭಟನೆಯಲ್ಲಿ ನೂರಾರು ಜನ ರೈತ ಕಾರ್ಮಿಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸಿದ್ದರಾಮ ಕಟ್ಟಿ ಹಾಗೂ ಸಂಘಟನಾ ಸಂಚಾಲಕರಾದ ಶಿವ ಕುಮಾರ್ ಹೆಗಡೆ, ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮರೆಪ್ಪ ಹೊತ್ತಿನ ಮಡು ದೇವರಾಜ್ ಬನಮಿ, ಮಹಾದೇವ ಕಟ್ಟಿಮನಿ, ಆನಂದ ಮಯೂರ, ಮಲಕಣ್ಣ ಗೌನಳ್ಳಿ, ಶಿವಲಿಂಗ ಬನಾಮಿ ವಿಶ್ವರಾಧ್ಯ ಚಿಕ್ಕ ಜೇವರ್ಗಿ, ಬಸವರಾಜ್ ಅಂಬರಖೇಡ, ಮಲ್ಲಿಕಾರ್ಜುನ್ ಬಿಲ್ಲಾರ್ ಎನ್ಎಸ್ಎಸ್ ರಾಜ್ಯಾಧ್ಯಕ್ಷರು, ಶಿವಶರಣಪ್ಪ ಆಂದೋಲ ಸೇರಿದಂತೆ ನಿಂಗಣ್ಣ ರದ್ದೇವಾಡಗಿ ಇತರ ಮುಖಂಡರು ಭಾಗವಹಿಸಿದ್ದರು. ಜೇವರ್ಗಿ ತಹಸೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಹಾಗೂ ಕಂದಾಯ ಸಚಿವರಾದ ಆರ್ ಅಶೋಕ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here