ಸೆಪ್ಟೆಂಬರ್ 11 ರಂದು ರಂಗಾಯಣದಿಂದ “ರಂಗಾಂತರಾಳ-2” ಕಾರ್ಯಕ್ರಮ

0
22

ಕಲಬುರಗಿ: ಕಲಬುರಗಿ ರಂಗಾಯಣದಿಂದ (ರಂಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹಿರಿಯರ ಮತದಾಳದ ಮಾತುಗಳು) ರಂಗಾಂತರಾಳ-2 ಕಾರ್ಯಕ್ರಮವನ್ನು ಶುಕ್ರವಾರ ಸೆಪ್ಟೆಂಬರ್ 11 ರಂದು ಸಂಜೆ 5 ಗಂಟೆಗೆ ಕಲಬುರಗಿಯ ಹೊಸ ಆರ್.ಟಿ.ಓ. ಕಚೇರಿಗೆ ಎದುರಿಗೆಯಿರುವ ರಂಗಾಯಣ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಈ ತಿಂಗಳ ಅತಿಥಿಯಾಗಿ ಹಿರಿಯ ರಂಗಭೂಮಿ ನಿರ್ದೇಶಕ ಲಕ್ಕಪ್ಪ ಮಾಸ್ತರ್ ಕಡಗಂಚಿ ಆಗಮಿಸಿ, ಅವರು ತಮ್ಮ ರಂಗಾಂತರಾಳವನ್ನು ತರೆದಿಡಲಿದ್ದಾರೆ. ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

Contact Your\'s Advertisement; 9902492681

ರಂಗಾಯಣದಿಂದ “ರಂಗಾಂತರಾಳ” ಎಂಬ ಶೀರ್ಷಿಕೆಯಡಿ ಪ್ರತಿ ತಿಂಗಳು ರಂಗಭೂಮಿಯಲ್ಲಿ ವಿಶಿಷ್ಟ ಹಾಗೂ ವಿಶೇಷ ಸಾಧನೆಗೈದಿರುವ ಹಿರಿಯ ರಂಗಕರ್ಮಿಯೊಬ್ಬರನ್ನು ರಂಗಾಯಣಕ್ಕೆ ಆಹ್ವಾನಿಸಿ, ಅವರ ರಂಗಾನುಭವದ ಮಾತುಗಳನ್ನು ಹಂಚಿಕೊಳ್ಳುವ ವಿನೂತನ ಕಾರ್ಯಕ್ರಮ ರಂಗಾಯಣ ಹಮ್ಮಿಕೊಳ್ಳುತ್ತಿದೆ. ಇದು ಎರಡನೇ ಸಂಚಿಕೆಯಾಗಿದ್ದು, ಈ ತಿಂಗಳ ಅತಿಥಿಯಾಗಿ ಹಿರಿಯ ರಂಗಭೂಮಿ ನಿರ್ದೇಶಕ ಲಕ್ಕಪ್ಪ ಮಾಸ್ತರ್ ಕಡಗಂಚಿ ಇವರನ್ನು ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here