ಕೊರೊನಾ ವಾರಿಯರ್ಸ್‌ಗಳ ಸೇವೆ ಅವಿಸ್ಮರಣೀಯ: ಡಾ. ರಮೇಶ ಲಂಡನಕರ್

0
58

ಆಳಂದ: ಕಳೆದ ಐದಾರು ತಿಂಗಳುಗಳಿಂದ ಕೊರೊನಾ ಸೋಂಕಿತರ ಸೇವೆಯಲ್ಲಿ ನಿರತರಾದ ವೈದ್ಯರು,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಪತ್ರಕರ್ತರು, ಶುಶ್ರೂಷಕರು ಸೇರಿದಂತೆ ಕೊರೊನಾ ವಾರಿಯರ್ಸ್‌ಗಳವೆ ಸದಾ ಸ್ಮರಣೀಯ ಎಂದು ಗುಲಬರ್ಗಾ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ ರಮೇಶ ಲಂಡನಕರ್ ಅವರು ಹೇಳಿದರು.

ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಹಾ ಪುರುಷರ ವಿಚಾರ ವೇದಿಕೆಯ ಜಿಲ್ಲಾ ಘಟಕದ ಆಶ್ರಯದಲ್ಲಿ ’ಕೊರೊನಾ ವಾರಿಯರ್ಸ್‌ಗಳಿಗೆ ಏರ್ಪಡಿಸಿದ ಗೌರವ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಪೃಥ್ವಿಯ ಮೇಲೆ ಎಲ್ಲಾ ಜೀವಿಗಳು ಸಮಾನವಾಗಿ ಬದುಕಲು ಅವಕಾಶವಿದೆ. ಆದರೆ ಸ್ವಾರ್ಥ ಮಾನವ ಪರಿಸರ ಹಾನಿ ಮಾಡುವ ಮೂಲಕ ಅಸಮತೋಲನ ಸೃಷ್ಟಿ ಮಾಡಿ ಕೊರೊನಾ ಮಹಾ ಮಾರಿ ರೋಗಗಳ ಉತ್ಪತ್ತಿಗೆ ಕಾರಣನಾಗಿದ್ದಾರೆ. ಕಾಡು ಕಡಿದು ನಾಡು ಹಾಳು ಮಾಡುತ್ತಿದ್ದೇವೆ. ಹೀಗಾಗಿ ಭೂಮಿಯ ಮೇಲೆ ಶತಮಾನಗಳ ಅವಧಿಯಲ್ಲಿ ಸೋಂಕುಗಳು ಕಾಣಿಸಿ ಕೊಳ್ಳುತ್ತಿವೆ. ನಮ್ಮ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ವೈದ್ಯ ಡಾ ರಾಕೇಶ ಚವ್ಹಾಣ, ಬಿಜೆಪಿ ಮುಖಂಡ ಮಲ್ಲಿನಾಥ ಒಡೆಯರ್ ಮಾತನಾಡಿದರು. ಸನ್ಮಾನಿತರ ಪರವಾಗಿ ಮಾತನಾಡಿದ ಪತ್ರಕರ್ತ ಧರ್ಮಣ್ಣ ಧನ್ನಿ ಅವರು, ಕೊರೊನಾ ಕುರಿತು ಸ್ವ ರಚಿತ ಕವನ ವಾಚನ ಮಾಡಿದರು.
ಜಿಲ್ಲಾ ಬಿಜೆಪಿ ಹಿಂದೂಳಿದ ಘಟಕದ ಉಪಾಧ್ಯಕ್ಷ ಬಸಯ್ಯ ಗುತ್ತೇದಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೊರೊನಾ ಸಂದರ್ಭದಲ್ಲಿ ದೇವರ ಸೇವೆ ಕಾಣದಿದ್ದರೂ ಕೊರೊನಾ ವಾರಿಯರ್ಸ್‌ಗಳು ನಮಗೆಲ್ಲ ದೇವರಂತೆ ಕಾಣಸಿದರು ಎಂದು ಬಣ್ಣಿಸಿದರು.

ಮಹಾ ಪುರುಷರ ವಿಚಾರ ವೇದಿಕೆಯ ಅಧ್ಯಕ್ಷ ವಿಜಯಕುಮಾರ ಜಿಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮುಖಂಡ ಮಹುಬೂಬ ಪಟೇಲ್ ಅವರು ಉದ್ಘಾಟಿಸಿದರು.

ಉಪ ತಹಸೀಲ್ದಾರ ಮಹೇಶ ದಮರಗಿಡ್ಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಭಾಗಪ್ಪ ಸಿಂಗೆ, ಉಪನ್ಯಾಸಕ ಬಾಬುರಾವ ಚವ್ಹಾಣ, ಎಎಸ್,ಐ ಭದ್ರಪ್ಪ ಖ್ಯಾಮಿನ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇರ್ಫಾನ್ ಅಲಿ, ಪತ್ರಕರ್ತ ಶಿವಲಿಂಗ ತೇಲ್ಕರ, ಮುಖ್ಯ ಅಡುಗಾರ ರೇಖಾ ರಂಗನ, ಶ್ರೀಕಾಂತ ಗಾಯಕವಾಡ ಸೇರಿದಂತೆ ಅನೇಕ ಗ್ರಾಮದ ಗಣ್ಯರು ಪಾಲ್ಗೊಂಡಿದರು.

ನಂತರ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಹಾಗೂ ಸಸಿಗಳನ್ನು ನೀಡು ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here