ರೈಲ್ವೆ ಖಾಸಗೀಕರಣ ಪ್ರಸ್ತಾಪ ವಿರೋಧಿಸಿ ಎಸ್.ಯು.ಸಿ.ಐ (ಸಿ ) ಪ್ರತಿಭಟನೆ

0
50

ಕಲಬುರಗಿ: ಸಾರ್ವಜನಿಕರ ಹಣದಿಂದ ಕಟ್ಟಿರುವ ಲಾಭದಾಯಕವಾದ ಉದ್ದಿಮೆಯಾದ ಭಾರತೀಯ ರೈಲ್ವೆಯ ಖಾಸಗೀಕರಣ ಪ್ರಸ್ತಾಪ ಹಿಂಪಡೆಯಬೇಕೆಂದು ಆಗ್ರಹಿಸಿ ಸೋಷಲಿಸ್ಟ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಸ್ಟ್ ಪಕ್ಷದಿಂದ ನಗರದ ರೈಲು ನಿಲ್ದಾಣದ ಎದುರುಗಡೆ ಪ್ರತಿಭಟನಾ ಪ್ರದರ್ಶನ ನಡೆಸಿ, ಮಾನ್ಯ ಪ್ರಧಾನಮಂತ್ರಿಗಳಿಗೆ ಕಲಬುರಗಿ ರೈಲ್ವೆ ಸ್ಟೇಷನ್ ಮ್ಯಾನೇಜರ್ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ಎಚ್.ವಿ. ದಿವಾಕರ್, ಎಸ್.ಎಂ. ಶರ್ಮಾ, ಸೀಮಾ ದೇಶಪಾಂಡೆ, ಗಣಪರಾವ್ ಮಾನೆ, ರಾಘವೇಂದ್ರ ಎಂ. ಜಿ., ರಾಮಣ್ಣ ಇಬ್ರಾಹಿಂಪುರ್, ಭೀಮಾಶಂಕರ್ ಪಾಣೇಗಾಂವ್, ಜಗನಾಥ್ ಎಸ್. ಎಸ್. ಹಣಮಂತ ಎಸ್. ಎಚ್, ಈರಣ್ಣ ಇಸ್ಬಾ, ಶರಣು ವಿ. ಕೆ. ಸೇರಿದಂತೆ ಮುಂತಾದವರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here