ಕಲಬುರಗಿ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಮತ್ತು ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಅವರ ಆದೇಶದ ಮೇರೆಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೋಡ ಅವರ ನೇತೃತ್ವದಲ್ಲಿ ಸಭೆ ನಡೆಸಿ ಸಭೆಯಲ್ಲಿ ನೂತನ ಜಿಲ್ಲೆಯ ಆಳಂದ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಳ ಆಯ್ಕೆಯನ್ನು ಮಾಡಲಾಯಿತು.
ಜೈಚಿತ್ರ ಕೆ.ವೇದಶೆಟ್ಟಿ (ಅಧ್ಯಕ್ಷೆ), ರುಕ್ಮಿಣಿಬಾಯಿ ಕಟ್ಟಿಮನಿ, ಕಾವೇರಿ ಪಾಟೀಲ್, ರೋಹಿಣಿ ಜಳಕೆ (ಉಪಾಧ್ಯಕ್ಷರು), ಪ್ರಜ್ಞಾ ಬಂಡೆ, ಗೌರಮ್ಮ ಮಾನೆ, ಕವಿತಾ ನಾಯಕ (ಪ್ರಧಾನ ಕಾರ್ಯದರ್ಶಿಗಳು), ಜ್ಯೋತಿ ವಾಘಮೋರೆ, ಸುರೇಖಾ ಹತ್ತಿ, ಶಾಂತಬಾಯಿ ದಂಡಗುಳ (ಕಾರ್ಯದರ್ಶಿಗಳು), ಕಸ್ತೂರಿಬಾಯಿ ಶರಣನಗರ (ಖಜಾಂಚಿ), ಮಹಾದೇವಿ ಹಳಮನಿ, ಸಂಗೀತಾ ಚವ್ಹಾಣ, ನಾಗಮ್ಮ ಶೃಂಗೇರಿ, ನಶ್ರಿನಬಾನು ಮುಗಳೆ, ಶೀತಲ ಸಾವಳಗಿ, ಮಹಾದೇವಿ ಜಮಾದಾರ, ಶಕೇಲಿ ಇನಾಮದಾರ, ಬಸಮ್ಮ ಪಾಟೀಲ್, ವಿಮಲಾಬಾಯಿ ವಡೆಯರ್, ಪುಷ್ಪಾವತಿ ವಾಲಿಕರ್, ಸುಧಾರಾಣಿ ಬುರಡೆ, ಖಾಜಾಬಿ ಸಾವಳಗಿ (ಕಾರ್ಯಕಾರಿಣಿ ಸಮಿತಿ ಸದಸ್ಯರು) ಆಯ್ಕೆ ಮಾಡಿ ಆದೇಶ ಪತ್ರವನ್ನು ನಿಡಲಾಯಿತು.
ಈ ಸಂದರ್ಭದಲ್ಲಿ ಚಂದ್ರಕಾ ಪರಮೇಶ್ವರ, ರೇಖಾ ಚವ್ಹಾಣ, ವಾಣೀಶ್ರೀ ಸಗರಕರ್, ಐಮದಿ, ಗೀತಾ ಮುದಗೋಳ, ಕಮಲಾ ಇದ್ದರು.