ಕಲಬುರಗಿ: ಕಮಲಾಪುರ ತಾಲ್ಲೂಕಿನ ಕುರಿಕೋಟಾ, ಅಂಕಲಗಿ, ಸಿರಗಾಪುರ ಗ್ರಾಮದಲ್ಲಿ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಸ್ಥಳಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಲೀಮ್ ಇನಾಮದಾರ್, ತಹಶೀಲ್ದಾರ ಅಂಜುಮ್ ತಬಸುಮ್, ಪಿಎಸ್ಐ ಹುಸೇನ್ ಭಾಷಾ ಅವರು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಈಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಆನಂದ ಪಾಟೀಲ್, ಶಾದಬ್ ಮಲ್ಲಿಕ್, ಪ್ರವಿಣ ಜಾಧವ, ಅರವಿಂದ ರಂಜೋರಿ, ಶಫಿ ಪಟೇಲ್, ಧರ್ಮಣ್ಣ ಇದ್ದರು.