ಸುರಪುರ: ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಗ್ರುಪ್ ಒಂದರಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರನ್ನು ಅವಮಾನಿಸಿ ತುಚ್ಛವಾಗಿ ಮಾತನಾಡಲಾಗಿದೆ.ಅಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ ಒತ್ತಾಯಿಸಿದರು.
ಸಂಘದಿಂದ ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಜಗತ್ತಿಗೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ಕೊಟ್ಟವರು ಹಾಗು ಮಾನವ ಕುಲವನ್ನೆ ಉದ್ಧರಿಸುವಂತಹ ಮಾರ್ಗ ತೋರಿಸಿ ಮಹರ್ಷಿ ವಾಲ್ಮೀಕಿಯವರ ಕುರಿತು ವಾಟ್ಸಾಪ್ ಗ್ರುಪ್ ಒಂದರಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರನ್ನು ಅಶ್ಲೀಲ ಪದದಿಂದ ಹೆಸರಿಸುವ ಮೂಲಕ ಘೋರ ಅಪಮಾನ ಮಾಡಿದ್ದಾರೆ.ಆದ್ದರಿಂದ ಸರಕಾರ ಕೂಡಲೆ ವಾಟ್ಸಾಪ್ ಗ್ರುಪ್ ಮಾಡಿಕೊಂಡು ಸಮಾಜದ್ರೋಹದ ಕೆಲಸಕ್ಕಿಳಿದಿರುವ ದ್ರೋಹಿಗಳನ್ನು ಕೂಡಲೆ ಬಂಧಿಸಿ ಗಡಿಪಾರು ಮಾಡಬೇಕು,ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ ಕರಿಬಾವಿ ಗಂಗಾಧರ ನಾಯಕ ತಿಂಥಣಿ ಶಿವರಾಜ ನಾಯಕ ವಾಗಣಗೇರಾ ರಮೇಶ ದೊರೆ ಸೇರಿದಂತೆ ಅನೇಕರು ಮಾತನಾಡಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು,ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹನುಮಂತ ನಾಯಕ ದೊರೆ ಚೌಡೇಶ್ವರಿಹಾಳ ನಾಗೇಂದ್ರ ದೊರೆ ಚಂದಲಾಪುರ ಪಿಡ್ಡಪ್ಪ ದೊರೆ ಗೊಡ್ರಿಹಾಳ ಬಸವರಾಜ ದೊರೆ ದೇವರಗೋನಾಲ ಮೌನೇಶ ಬಿರಾದಾರ್ ಗೌಡಗೇರಾ ಚಂದ್ರು ಗೌಡಗೇರಾ ಮಹೇಶ ಸಿದ್ದಾಪುರ ಮೌನೇಶ ಸಿದ್ದಾಪುರ ಬಸವರಾಜ ಪಾಟೀಲ ಅಂಬ್ರೇಶ ದೊರೆ ಮಾವಿನಮಟ್ಟಿ ಶರಣು ನಾಯಕ ರಮೇಶ ನಾಯಕ ಸೇರಿದಂತೆ ಅನೇಕರಿದ್ದರು.