ಸುರಪುರ: ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಜಿಲ್ಲೆಯ ಯುವ ಪತ್ರಕರ್ತರಿಗೆ ಹಿರಿಯಣ್ಣನಂತಿದ್ದು ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದ ವೆಂಕಟೇಶ ದೊರೆಯವರ ಅಗಲಿಕೆಯಿಂದ ತುಂಬಾ ನೋವಾಗಿದೆ.ಕೆಜೆಯು ಸದಾಕಾಲ ವೆಂಕಟೇಶ ದೊರೆಯ ಕುಟುಂಬದ ಸದಸ್ಯನಾಗಿರಲಿದೆ ಎಂದು ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿದರು.
ಕಳೆದ ೮ನೇ ತಾರೀಖು ಕೊರೊನಾ ಸೊಂಕಿನಿಂದ ನಿಧನರಾದ ಪತ್ರಕರ್ತ ವೆಂಕಟೇಶ ದೊರೆಯವರಿಗೆ ನಗರದ ಕೆಜೆಯು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಪತ್ರಕರ್ತರು ಯಾವುದೇ ಸಂದರ್ಭ ಎಂತಹ ವ್ಯಕ್ತಯಿದ್ದರು ಸುದ್ದಿಗಾಗಿ ಸಂದರ್ಶಿಸುತ್ತಾರೆ.ಜೀವದ ಹಂಗು ತೊರೆದು ವರದಿಗಾರಿಕೆಗಾಗಿ ತೆರಳುತ್ತಾರೆ,ಆದರೆ ಆರೋಗ್ಯದ ಬಗ್ಗೆ ಕಾಳಜಿಯೂ ಇಟ್ಟುಕೊಳ್ಳುವುದು ಅವಶ್ಯವಾಗಿದೆ.ಎಲ್ಲಾ ಪತ್ರಕರ್ತರು ಸದಾ ಜಾಗೃತರಾಗಿದ್ದು ಕೊರೊನಾ ಸೊಂಕು ತಗುಲದಂತೆ ಎಚ್ಚರವಹಿಸುವುದು ಮುಖ್ಯ ಎಂದರು.ಅಲ್ಲದೆ ನಮ್ಮ ಕೆಜೆಯುನ ಇಬ್ಬರು ಪತ್ರಕರ್ತರು ಕೊರೊನಾ ಸೊಂಕಿನಿಂದ ಮೃತರಾಗಿದ್ದು ಇಬ್ಬರ ಕುಟುಂಬಕ್ಕೆ ಶೀಘ್ರವಾಗಿ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಮಹಾದೇವಪ್ಪ ಬೊಮ್ಮನಹಳ್ಳಿ ಮಲ್ಲಿಕಾರ್ಜುನ ತಳ್ಳಳ್ಳಿ ಕಲೀಂ ಫರೀದಿ ರಾಘವೇಂದ್ರ ಮಾಸ್ತರ್ ಮನ್ಮೋಹನ್ ಪ್ರತಿಹಸ್ತ ದೇವಾಪುರ ಮಾತನಾಡಿ ಅಗಲಿದೆ ವೆಂಕಟೇಶ ದೊರೆಯವರಿಗೆ ನುಡಿ ನಮನ ಸಲ್ಲಿಸಿದರು.ಸಭೆಯ ಆರಂಭದಲ್ಲಿ ವೆಂಕಟೇಶ ದೊರೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂರ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಆತ್ಮಕ್ಕೆ ಶಾಂತಿ ಕೋರಲಾಯಿತು.
ಸಭೆಯಲ್ಲಿ ಶಿವರಾಜಕುಮಾರ ಪಾಣೆಗಾಂವ್ ದೇವೆಂದ್ರ ನಾಯಕ ದೊರೆ ಶ್ರೀಮಂತ ಚಲುವಾದಿ ಭಾಗಪ್ಪ ನಾಯಕ ರುಕ್ಮಾಪುರ ಪತ್ರಕರ್ತರಾದ ಮಲ್ಲಿಕಾರ್ಜುನ ಗುಳಗಿ ಮುರಳಿಧರ ಅಂಬುರೆ ಪುರುಷೋತ್ತಮ ದೇವತ್ಕಲ್ ಮದನಲಾಲ್ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.