ಸುರಪುರ: ತಾಲೂಕಿನ ಬೋನಾಳ ಚಿಕ್ಕನಹಳ್ಳಿ ಮಾರ್ಗವಾಗಿ ಹೆಬ್ಬಾಳ ಮೂಲಕ ಮುಖ್ಯರಸ್ತೆಗೆ ತಲುಪಿಸುವ ಹುಣಸಗಿ ರಸ್ತೆ ಮಳೆಯಿಂದ ಕೊಚ್ಚಿ ಹೋಗಿ ಸಂಚಾರ ಬಂದಾಗಿದೆ.ಈ ರಸ್ತೆಯ ಮೂಲಕ ಹುಣಸಗಿ ತಾಲೂಕಿಗೆ ಹಾಗು ಬೇರೆ ಬೇರೆ ಹಳ್ಳಿಗಳಿಗೆ ಹೋಗುವ ನೂರಾರು ವಾಹನಗಳು ಇದೇ ರಸ್ತೆಯ ಮೂಲಕ ಓಡಾಡುತ್ತಿದ್ದು ಈಗ ಮಳೆಯಿಂದ ರಸ್ತೆ ಕೊಚ್ಚಿ ಹೋಗಿದ್ದರಿಂದ ಸಂಚಾರ ರದ್ದಾಗಿದೆ.
ಇದರಿಂದ ಕೇವಲ ಹುಣಸಗಿಗೆ ಹೋಗುವ ಜನತೆ ಮಾತ್ರವಲ್ಲದೆ ಹೆಬ್ಬಾಳ ಬೆನಕನಹಳ್ಳಿಯ ಅನೇಕ ರೈತರು ತಮ್ಮ ಹೊಲ ಗದ್ದೆಗಳಿಗೂ ಹೋಗಲು ಸಂಕಷ್ಟ ಎದುರಾಗಿದೆ.ಆದ್ದರಿಂದ ತಾಲೂಕು ಆಡಳಿತ ಕೂಡಲೆ ರಸ್ತೆಯನ್ನು ದುರಸ್ಥಿಗೊಳಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ವೆಂಕಟೇಶ ಕಲ್ಲದೇವನಹಳ್ಳಿ ಆಗ್ರಹಿಸಿದ್ದಾರೆ.