ಶಹಾಬಾದ:ನಗರ ಬಿಜೆಪಿ ಹಿರಿಯ ಮುಖಂಡರಿಂದ ವಿಧಾನ ಸಭೆ ಸದಸ್ಯ ಸುನೀಲ ವಲ್ಯಾಪುರೆ ಹಾಗೂ ಅವರ ಪುತ್ರ ವಿನಯ ವಲ್ಯಾಪುರೆ ಅವರ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಬಿಜೆಪಿ ಹಿರಿಯ ಮುಖಂಡ ಭೀಮರಾವ ಸಾಳೊಂಕೆ, ಮಾಜಿ ಅಧ್ಯಕ್ಷ ಸುಭಾಷ ಜಾಪೂರ ನೇತೃತ್ವದಲ್ಲಿ ಜಗದಂಬಾ ದೇವಸ್ಥಾನದಲ್ಲಿ ವಲ್ಯಾಪುರೆ ಅವರಿಗೆ ಕರೋನ ಸೊಂಕು ಕಂಡು ಬಂದ ಹಿನ್ನೇಲೆಯಲ್ಲಿ ಅವರ ಆರೋಗ್ಯ ಸುಧಾರಿಸಿ, ಜನ ಸೇವೆಗೆ ಕಟಿಬದ್ಧರಾಗಲು ವಿಶೇಷ ಆರತಿ ಮಾಡಿ, ಪ್ರಾರ್ಥನೆ ಸಲ್ಲಿಸಲಾಯಿತು.
ಕರಪಕ್ಷದ ಹಿರಿಯ ಮುಖಂಡರಾದ ಕನಕಪ್ಪ ದಂಡಗುಲಕರ್, ಅನೀಲಕುಮಾರ ಬೊರಗಾಂವಕರ್, ಅರುಣಕುಮಾರ ಪಟ್ಟಣಕರ, ದುರ್ಗಪ್ಪ ಪವಾರ, ಬಸವರಾಜ ಬಿರಾದಾರ, ಡಾ.ಅಶೋಕ ಜಿಂಗಾಡೆ, ಅನೀಲ ಹೀಬಾರೆ, ದೇವದಾಸ ಜಾಧವ, ಶಿವಾಜಿ ರೆಡ್ಡಿ ಇತರರು ಇದ್ದರು.