ಮರೆವು ರೋಗಕ್ಕೆ ಮುಂಜಾಗ್ರತಾ ಕ್ರಮಗಳು ಅಗತ್ಯ: ಡಾ.ಅನುಪಮಾ ಕೇಶ್ವಾರ

0
29

ಕಲಬುರಗಿ: ವಯಸ್ಸಾದಂತೆ ನೆನಪಿನ ಶಕ್ತಿ ಕಳೆದುಕೊಂಡು ಮರೆವು ಆವರಿಸುವುದು ಸಹಜ. ವಾಯುವಿಹಾರ, ಯೋಗ, ಧ್ಯಾನ, ಪ್ರಾರ್ಥನೆ, ಸೂಕ್ತ ಆಹಾರ ಮತ್ತು ವಿಶ್ರಾಂತಿ ಪದ್ಧತಿ, ಸಕ್ಕರೆ ಸೇವನೆ ಮಾಡದಿರುವುದು, ಪ್ರಮಾಣ ಕಡಿಮೆಗೊಳಿಸುವುದು, ಮೆದುಳಿನ ಆರೋಗ್ಯ ರಕ್ಷಣೆ, ಒಂಟಿತನದಿಂದ ದೂರವಿರುವುದು, ಕುಟುಂಬ ಹಾಗೂ ಸಮಾಜದ ಸಕಾರಾತ್ಮಕ ಪ್ರಭಾವದ ಮುಂತಾದ ಮುಂಜಾಗ್ರತಾ ಕ್ರಮಗಳ ಮೂಲಕ ಮರೆವು ರೋಗದಿಂದ ದೂರವಿರಬಹುದಾಗಿದೆಯೆಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಹೇಳಿದರು.

ಅವರು ನಗರದ ಶೇಖರೋಜಾದಲ್ಲಿರುವ ಶಹಾಬಜಾರ ’ನಗರ ಪ್ರಾಥಮಿಕ ಆರೋಗ್ಯ ಕೇಂದ’ದಲ್ಲಿ ಸೋಮವಾರ ಏರ್ಪಡಿಸಿದ್ದ ’ವಿಶ್ವ ಮರೆವು ರೋಗ ದಿನಾಚರಣೆ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಮರೆವು ಕಾಯಿಲೆಯವರು ಬಹುತೇಕವಾಗಿ ಯಾವುದೇ ವಿಷಯಗಳು, ವಸ್ತುಗಳನ್ನು ಮರೆತು ಬಿಡುತ್ತಾರೆ. ಅರಳು-ಮರಳಾಗಿ ವರ್ತಿಸುವುದು, ಜ್ಞಾಪಕ ಶಕ್ತಿ ಕುಂದುವುದು, ಮೆದುಳಿನ ಜೀವಕೋಶಗಳ ನಾಶ, ತಾರ್ಕಿಕ ಶಕ್ತಿ ನಾಶದಂತಹ ಲಕ್ಷಣಗಳು ಮರೆವು ರೋಗದ ಲಕ್ಷಣಗಳಾಗಿವೆ. ರೋಗಿಗಳನ್ನು ಕೀಳಾಗಿ ಕಾಣುವುದು ಬೇಡ. ಅವರ ಜೊತೆ ಆಪ್ತವಾಗಿ ವರ್ತಿಸಬೇಕು. ತಜ್ಞರ ಪ್ರಕಾರ ನೂರರಲ್ಲಿ ಇಬ್ಬರಿಗೆ ಕಾಡುವ ಕಾಯಿಲೆ ಇದಾಗಿದ್ದು, ಆರಂಭದಲ್ಲಿ ಇದರ ಲಕ್ಷಣಗಳನ್ನು ಗುರ್ತಿಸಿ, ಸೂಕ್ತ ಜೀವನಶೈಲಿಯ ಬದಲಾವಣೆಯ ಮೂಲಕ ಮರೆವು ಕಾಯಿಲೆ ಬರದಂತೆ ತಡೆಯಬಹುದಾಗಿದೆಯೆಂದರು.

ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಸಮಾಜ ಸೇವಕ ಸುನೀಲಕುಮಾರ ವಂಟಿ, ಪ್ರಮುಖರಾದ ಬಸವರಾಜ ಎಸ್.ಪುರಾಣೆ, ಅಮರ ಜಿ.ಬಂಗರಗಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ನಾಗೇಶ್ವರಿ, ಮಂಗಲಾ, ಶ್ರೀದೇವಿ, ಚಂದಮ್ಮ ಮರಾಠಾ, ಅರ್ಚನಾ ಸಿಂಗೆ, ಅನಿತಾ ಕಣಸೂರ, ಕಲ್ಯಾಣಿ ಹರಳಯ್ಯ, ಲಕ್ಷ್ಮೀ, ಸಂಗಮ್ಮ, ಅಣವೀರಯ್ಯ ಮಠಪತಿ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here