ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಸಂಘದಿಂದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ

0
128

ಸುರಪುರ: ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಸಂಘದ ಮುಖಂಡರು ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಸವರಾಜ ಹೊಸ್ಮನಿ ಮಾತನಾಡಿ,ಸರಕಾರ ದೇಶದಲ್ಲಿ ದಲಿತರು ತುಳಿಯುವ ಕೆಲಸ ಮಾಡುತ್ತಿದೆ.ಇದನ್ನು ಖಂಡಿಸುವುದಾಗಿ ನುಡಿದರು.ಅಲ್ಲದೆ ದಲಿತ ವಿರೋಧಿ ಭೂ ಸುಧಾರಣಾ ಕಾಯ್ದೆ ಹಿಂಪಡೆಯಬೇಕು,ದೌರ್ಜನ್ಯ ತಡೆ ಕಾಯ್ದೆ ಬಲಗೊಳಿಸಬೇಕು,ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು,ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು,ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ಮತ್ತು ಸದಾಶಿವ ಆಯೋಗದ ವರದಿ ಬಹಿರಂಗಪಡಿಸಬೇಕು,ಮೀಸಲಾತಿ ಮತ್ತು ಬಡ್ತಿ ಮೀಸಲಾತಿಯಲ್ಲಿನ ಅನ್ಯಾಯ ಸರಿಪಡಿಸಬೇಕು,ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಉಪಯೋಜನೆ ಅಡಿಯ ಅನುದಾ ಸಮರ್ಪಕವಾಗಿ ಬಳಕೆಮಾಡಬೇಕು,ಭೂ ಒಡೆತನ ಮತ್ತು ಉದ್ಯೋಗಕ್ಕಾಗಿ ಸಲ್ಲಿಸಿರುವ ಎಲ್ಲಾ ಅರ್ಜಿಗಳ ಅನುದಾನ ಒದಗಿಸಬೇಕು,ಅಂಬೇಡ್ಕರ ಮತ್ತು ಇಂದಿರಾ ಆವಾಸ್ ಸೇರಿದಂತೆ ಎಲ್ಲಾ ಯೊಜನೆಗಳ ಅಡಿಯಲ್ಲಿ ಹಿತ್ತಲ ಮನೆಗಾಗಿ ೪ ಗುಂಟೆ ಜಾಗ ಮೀಸಲಿಡಬೇಕು ಹಾಗು ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನ ಹೆಚ್ಚಳ ಕುಟುಂಬದ ಗಣತಿ ಮಾಡಿ ಪುನರ್ ವಸತಿ ಕಲ್ಪಿಸಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಕಾಶ ಆಲ್ಹಾಳ ಸಮಾಜಿಕ ಕಾರ್ಯಕರ್ತ ಎಸ್.ಬಿ.ಹನ್ಸೂರ್ ಬಸವರಾಜ ಮಡಿವಾಳ ಶರಣಬಸವ ಕಾಂಬ್ಳೆ ಭೀಮವ್ವ ವೀರಾಬಾಯಿ ನಾಗಮ್ಮ ಎಸ್ ಈರಮ್ಮ ನಿಂಗಮ್ಮ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here