ಸೋಂಕಿತ ಸರಕಾರ ಎಂಬ ಬರವಣಿಗೆ ಮಾಸ್ಕ್ ಧರಿಸಿ ಗಮನ ಸೆಳೆದ ಕೆಪಿಸಿಸಿ ವಕ್ತಾರ ಶಾಸಕ ಖರ್ಗೆ

0
72

ಬೆಂಗಳೂರು: ಸೋಂಕಿತ ಸರಕಾರ ಎಂದು ಬರೆಯಲಾದ ಮಾಸ್ಕ್ ಧರಿಸಿ ಅಧಿವೇಶನದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದ ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಅದೇ ಫೋಟೋ ಬಳಸಿ ಟ್ವಿಟ್ ಮಾಡುವ ಮೂಲಕ ಬಿಜೆಪಿ ಸರಕಾರದ ಒಟ್ಟಾರೆ ವೈಫಲ್ಯವನ್ನು ಟೀಕಿಸಿದ್ದಾರೆ.

“ಅಧಿವೇಶನದಲ್ಲಿ ಸಾಕಷ್ಟು ಮಾತನಾಡಲು ಅನುಮತಿ ನಿರಾಕರಿಸಿದ್ದರಿಂದ‌ ವಿರೋಧಪಕ್ಷವಾದ ನಮಗೆ ಈ ರೀತಿ ಮಾಸ್ಕ್ ಧರಿಸಿ ಪ್ರತಿಭಟನೆ ಮಾಡುವ ಮೂಲಕ ನಿಮ್ಮ ಸಂದೇಶವನ್ನು ಆಡಳಿತ ಪಕ್ಷದವರಿಗೆ ತಲುಪಿಸುವುದೇ ಸರಿಯಾದ ಮಾರ್ಗವಾಗಿದೆ” ಎಂದು ಶಾಸಕ ಖರ್ಗೆ ಖಾರವಾಗಿ ಟ್ವಿಟ್ ಮಾಡಿದ್ದಾರೆ.

Contact Your\'s Advertisement; 9902492681

ಮುಂದುವರೆದ ಅವರು ” ದುರಾದೃಷ್ಟವೆಂದರೆ, ಮಾಸ್ಕ್ ಧರಿಸಿ ಕೊರೋನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಆದರೆ, ಬಿಜೆಪಿ ಸರಕಾರದ ದುರಾಡಳಿತದಿಂದಲ್ಲ” ಎಂದು ಕುಟುಕಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here