ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಬಸವಣ್ಣ ಧ್ವನಿಯಾಗಿ ವಿಧಾನಸಭೆಯಲ್ಲಿ ಮಾತು ಮೌನವಾಯಿತು, ಅತಿ ಬಡತನ ಕುಟುಂಬದಲ್ಲಿ ಹುಟ್ಟಿ ಹಿಂದುಳಿದ ವರ್ಗದ ನ್ಯಾಯಗೊಸ್ಕರ ಹೋರಾಡಿದ ಸರಳ ವ್ಯಕ್ತಿ ಬಿ.ನಾರಾಯಣರಾವ ಆಗಿದ್ದರು ಎಂದು ವಾಯು ವಿಹಾರದ ಅಧ್ಯಕ್ಷರಾದ ವೀರಣ್ಣಗೌಡ ಮಲ್ಲಾಬಾದಿ ಹೇಳಿದರು.
ಸುಮಾರು 40 ವರ್ಷ ಹೋರಾಟ ಮಾಡಿ, ಸಾಮಾನ್ಯ ಬಡವರ ಕುಟುಂಬದ ಒಬ್ಬ ಸದಸ್ಯ, ವಿಧಾನ ಸಭೆಗೆ ಪ್ರವೇಶ ಮಾಡಬಹುದು ಎಂದು ಬಿ.ನಾರಾಯಣರಾವ ಅವರೇ ಸಾಕ್ಷಿ ಎನ್ನಬಹುದು.
ಅಕ್ಕಮಹಾದೇವಿ ಕಾಲೋನಿಯ ವಾಯು ವಿಹಾರ ಗೆಳೆಯರ ಬಳಗದಿಂದ ಇಂದು ಮೌನ ಆಚರಣೆ ಮತ್ತು ಶ್ರದ್ಧಾಂಜಲಿ ಸಭೆ ಮಾಡಲಾಯಿತು.
ಮುಖಂಡರಾದ ತುಕರಾಮಗೌಡ ಪಾಟೀಲ, ಶಿವಶರಣಪ್ಪ ಕೋಬಾಳ, ದೇವಿಂದ್ರಪ್ಪ ಮರತೂರ, ಗುರುಶಾಂತಪಟ್ಟೆದಾರೆ, ಮಲ್ಲಿಕಾರ್ಜುನ ಸಾಹು ಆಲೂರ, ಮಹಾಂತೇಶ ಪಾಟೀಲ, ಸಂಗನಗೌಡ ಪಾಟೀಲ, ನೀಲಕಂಠ ಅವಂಟಿ, ವಸಂತರಾವ ನರಬೋಳ, ಚಂದ್ರಪ್ಪ ಮಾಸ್ಟರ್, ವಿದ್ಯಾಧರ, ಮಹಾಂತಗೌಡ, ಮಲ್ಲಿಕಾರ್ಜುನ ಸಾಹುಕಾರ ಅಜಗೊಂಡ, ಶ್ರೀಕಾಂತ ಕಲಕೇರಿ, ಮಾರಾಯ, ತಿಪ್ಪಣ್ಣರೆಡ್ಡಿ, ಲಕ್ಷ್ಮಪುತ್ರ ಜಮದಾರ, ಹುಲ್ಲಕಂಠರಾಯ, ಶಾಂತಪ್ಪ ನಿಂಬಾಳ, ನಾನಾಸಾಬ್ ಪಾಟೀಲ ಕೂಡಿ, ಹಣಮಂತರಾಯಗೌಡ, ಬಸವರಾಜ ಮರತೂರ, ನಾಸಿ, ಭೊಳ್ಳುರಗಿ, ಬಿ.ಎಂ.ಪಾಟೀಲ್ ಕಲ್ಲೂರ, ಭಟ್ಟ ಉಪಸ್ಥಿತರಿದ್ದರು.