ಕಲಬುರಗಿ: ಒಳ್ಳೆಯ ವಿದ್ಯಾ ಮತ್ತು ಬುದ್ಧಿ ಹಿಂದೆ ಯಾವುದೇ ಛಲ ಹಾಗೂ ಗುರಿ ಯಾಗಿರಲಿ ಅವರನ್ನು ಮಹಾ ನಾಯಕ ಮಾಡದೇ ಬಿಟ್ಟಿರುವುದು ಭಾರತದ ಇತಿಹಾಸದಲೇ ಇಲ್ಲಾ ಎಂದು ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಶಿವರಾಜ ಅಂಡಗಿ ಹೇಳಿದರು.
ಬಸವೇಶ್ವರ ಕಾಲೋನಿಯ ಬುದ್ಧ ಬಸವ,ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಹಮ್ಮಿಕೊಂಡ ಮಾಹಾನಾಯಕ ಧಾರವಾಹಿ ಬ್ಯಾನರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಬ್ಬ ವಿದ್ಯಾರ್ಥಿ ತನ್ನ ಬಾಲ್ಯದಿಂದಲೂ ಪಡೆದ ಕಷ್ಟಗಳು, ಅನುಭವಿಸಿದ ನಷ್ಟಗಳು, ಶ್ರಮದಿಂದ ಎದುರಿಸಿದ ಸಮಸ್ಯೆಗಳು,ಅನಾನುಕೂಲತೆಗಳ ಮದ್ಯೆದಲ್ಲಿ ಗಳಿಸಿದ ವಿದ್ಯೆ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಪ್ರೆರಣೆ ಯಾಗುವಂತಹಾ ವಿಷಯಗಳನೊಳಗೊಂಡ “ಮಾಹಾ ನಾಯಕ ” ಸಂವಿಧಾನದ ಶಿಲ್ಪ ಡಾ.ಬಿ ಆರ್ ಅಂಬೇಡ್ಕರ್ ಜೀವನ ಆಧಾರಿತ ಧಾರಾವಾಹಿ ಎಂದರು.
ಎಲ್ಲರೂ ನೊಡಲೇಬೇಕಾದ ಧಾರಾವಾಹಿ ಒಂದು ಫೊಟೂ ನೂರು ಪದಗಳಿಗೆ ಸಮ ಅನ್ನುವಂತೆ ಈ ಧಾರಾವಾಹಿ ಸಾವಿರ ಪುಸ್ತಕ ಓದಿ ಪಡೆಯುವ ಜ್ಞಾನಕಿಂತ ಕಡಿಮೆಎನ್ನಿಲ್ಲಾ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಆಯೋಜಕರಾದ ಬಸವ ತತ್ಚ ಆಚರಣಾ ಸಂಸ್ಥೆಯ ಜಗದೀಶ್ ಪಾಟೀಲ, ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅದ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ವಿಶ್ವಜ್ಯೋತಿ ಪ್ರತಿಷ್ಠಾನ ಗೌರವ ಅದ್ಯಕ್ಷರಾದ ಪ್ರಭವ ಪಟಣ್ಣಕರ್, ಚೌಡೇಶ್ವರಿ ಸೇವಾ ಪ್ರತಿಷ್ಠಾನ ಕಾರ್ಯದರ್ಶಿ ವಿನೋದಕುಮಾರ ಜನೆವೆರೆ, ಕವಿರಾಜ ಕೂಳಕೂರ, ವೀರೇಶ ವಾಲಿಶಟ್ಟಿ, ರಾಚಯ್ಯ ಮಠಪತಿ, ಕ್ಲಾಸ್ ಒನ್ ಕಾಂಟ್ರಾಕ್ಟ್ರ ಸಂತೋಷ ನಂದಗಾಂವಿ ಸಂಗಮನಾಥ, ಹಾಗೂ ಇತರರು ಉಪಸ್ಥಿತರಿದ್ದರು