Tuesday, July 16, 2024
ಮನೆಬಿಸಿ ಬಿಸಿ ಸುದ್ದಿ'ಅನ್ನದಾತರಿಗೆ ಅನ್ಯಾಯ' ಮಾಸ್ಕ್‌ಗ ಧರಿಸಿ ವಿರೋಧ ಪಕ್ಷದ ನಾಯಕರಿಂದ ಅಧಿವೇಶನಲ್ಲಿ ಪ್ರತಿಭಟನೆ

‘ಅನ್ನದಾತರಿಗೆ ಅನ್ಯಾಯ’ ಮಾಸ್ಕ್‌ಗ ಧರಿಸಿ ವಿರೋಧ ಪಕ್ಷದ ನಾಯಕರಿಂದ ಅಧಿವೇಶನಲ್ಲಿ ಪ್ರತಿಭಟನೆ

ಬೆಂಗಳೂರು: ಭವಿಷ್ಯದಲ್ಲಿ ರೈತರಿಗೆ ಮಾರಕವಾಗಿ ಪರಿಣಮಿಸುವ ಮಸೂದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡಲು ಹೊರಟಿರುವ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ವಿರೋಧ ಪಕ್ಷದ ಅಭಿಪ್ರಾಯ ಮಂಡಿಸಲು ಸದನದಲ್ಲಿ ಅವಕಾಶ ಸಿಗದ ಕಾರಣ, ‘ಅನ್ನದಾತರಿಗೆ ಅನ್ಯಾಯ’ ಎಂಬ ಬರಹ ಮುದ್ರಿಸಿದ ಮಾಸ್ಕ್‌ಗಳನ್ನು ಧರಿಸಿ ವಿರೋಧ ಪಕ್ಷದ ನಾಯಕರು  ಅಧಿವೇಶನಲ್ಲಿ ಭಾಗವಹಿಸಿದರು.

ಕಾಂಗ್ರೆಸ್ ಪಕ್ಷದ ಈ ವಿನೂತನ ರೀತಿಯ ಪ್ರತಿಭಟನೆಗೆ ಇಂದು ವಿಧಾನಸೌಧ ಸಾಕ್ಷಿಯಾಯಿತು.  ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರು ಹಾಗೂ ಶಾಸಕರು ಈ ಮಾಸ್ಕ್‌ಗಳನ್ನು ಧರಿಸಿ ಸರ್ಕಾರದ ನಿರ್ಣಯದ ವಿರುದ್ಧ ಪ್ರತಿಭಟಿಸಿದರು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ರೈತರನ್ನು ಬಹುರಾಷ್ಟ್ರೀಯ ಕಂಪೆನಿಗಳ ಗುಲಾಮರನ್ನಾಗಿ ಮಾಡುವ ಈ ಸುಗ್ರೀವಾಜ್ಞೆಗಳನ್ನು ರಾಜ್ಯ ಸರ್ಕಾರವು ಈ ಕೂಡಲೇ ಹಿಂಪಡೆಯಬೇಕೆಂದು ನಾಯಕರು ಈ ಮೂಲಕ ಆಗ್ರಹಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular