ಸುರಪುರ ನಗರದ ವಣಕಿಹಾಳಕ್ಕೆ ಶಾಸಕ ರಾಜುಗೌಡ ಭೇಟಿ

0
76

ಸುರಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ನಷ್ಟಕ್ಕೀಡಾಗಿರುವ ನಗರದ ವಾರ್ಡ್ ಸಂಖ್ಯೆ ೩೦ ಹಾಗು ೩೧ರ ವಣಕಿಹಾಳದ ಭಿಕ್ಷಕುರ ಕಾಲೋನಿಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಸಕರು ಅಲ್ಲಿಯ ಕುಟುಂಬಸ್ಥರನ್ನುದ್ದೇಶಿಸಿ ಮಾತನಾಡಿ,ಇದು ಅನೇಕ ವರ್ಷಗಳ ಸಮಸ್ಯೆಯಾಗಿದ್ದು ಶೀಘ್ರದಲ್ಲಿಯೆ ಇದಕ್ಕೆ ಶಾಸ್ವತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.ಅಲ್ಲದೆ ಸದ್ಯ ಮಳೆ ನೀರಿನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳನ್ನು ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಅವರಿಗೆ ಎಲ್ಲ ರೀತಿಯ ನೆರವು ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

Contact Your\'s Advertisement; 9902492681

ಶಾಸಕ ರಾಜುಗೌಡರಿಗೆ ಸ್ಥಳಿಯರ ಮನವಿ ಮಾಡಿ,ನಮಗೆ ಪ್ರತಿಬಾರಿ ಮಳೆ ಬಂದರೆ ನಮ್ಮ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿಯಿದೆ.ಹಾಗಾಗಿ ನಾವು ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆ ನಮಗೆ ಶಾಸ್ವತ ಪರಿಹಾರ ದೊರಕಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಾಂತಪ್ಪ ಸಮುದಾಯ ಸಂಘಟನಾಧಿಕಾರಿ ಓಂಕಾರೆಪ್ಪ ಪೂಜಾರಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಮುಖಂಡರಾದ ಸಿದ್ದನಗೌಡ ಕರಿಬಾವಿ ಯಲ್ಲಪ್ಪ ಕುರಕುಂದಿ ಹೆಚ್.ಸಿ.ಪಾಟೀಲ ಅಯ್ಯಪ್ಪ ಅಕ್ಕಿ ಜೆಟ್ಟೆಪ್ಪ ವಿರುಪಾಕ್ಷಿ ಮಕಾಶಿ ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here