ಉತ್ತರ ಪ್ರದೇಶದಲ್ಲಿನ ಯುವತಿ ಅತ್ಯಾಚಾರ ಖಂಡಿಸಿ ೫ ರಂದು ಸುರಪುರ ಬಂದ್

0
42

ಸುರಪುರ: ಉತ್ತರ ಪ್ರದೇಶಲ್ಲಿ ಕೆಲ ದಿನಗಳ ಹಿಂದೆ ನಡೆದ ಯುವತಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಿ ನಗರದ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಉತ್ತರ ಪ್ರದೇಶದಲ್ಲಿ ನಡೆದ ದಲಿತ ಸಮುದಾಯದ ಯುವತಿ ಮನಿಷಾ ವಾಲ್ಮೀಕಿ ಮೇಲಿನ ಅತ್ಯಾಚಾರ ಖಂಡನಿಯವಾಗಿದೆ,ಇತ್ತೀಚೆಗೆ ದೇಶದಲ್ಲಿ ಯುವತಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿವೆ,ಇದನ್ನು ಯಾರು ಸಹಿಸಲು ಸಾಧ್ಯವಿಲ್ಲ,ಈಗ ಉತ್ತರ ಪ್ರದೇಶದಲ್ಲಿ ಯುವತಿ ಮನಿಷಾ ವಾಲ್ಮೀಕಿಯನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ.ಇದನ್ನು ಖಂಡಿಸಿ ಹಾಗು ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೊಲೆ ಅನ್ಯಾಯವನ್ನು ಖಂಡಿಸಿ ಇದೇ ೫ನೇ ತಾರೀಖು ಸೋಮವಾರ ಸುರಪುರ ನಗರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು.

Contact Your\'s Advertisement; 9902492681

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರಮೇಶ ದೊರೆ ಆಲ್ದಾಳ ವೆಂಕಟೇಶ ಬೇಟೆಗಾರ ವೆಂಕೋಬ ದೊರೆ ಬೊಮ್ಮನಹಳ್ಳಿ ದೇವಿಂದ್ರಪ್ಪ ಪತ್ತಾರ ಭಂಡಾರಿ ನಾಟೇಕಾರ್ ಮಾಳಪ್ಪ ಕಿರದಹಳ್ಳಿ ರಾಹುಲ್ ಹುಲಿಮನಿ ಖಾಜಾ ಖಲೀಲ ಅಹ್ಮದ್ ಅರಕೇರಿ ಸಂಗಣ್ಣ ಬಾಕ್ಲಿ ಮಲ್ಲಯ್ಯ ಕಮತಗಿ ನಾಗಣ್ಣ ಕಲ್ಲದೇವನಹಳ್ಳಿ ರವಿ ನಾಯಕ ಬೈರಿಮರಡಿ ಮಹ್ಮದ್ ಮೌಲಾ ಸೌದಾಗರ್ ನಾಗರಾಜ ಓಕಳಿ ನಿಂಗಣ್ಣ ಗೋನಾಲ ಶಿವರಾಜ ನಾಯಕ ಭೀಮರಾಯ ಸಿಂದಗೇರಿ ತಿಪ್ಪಣ್ಣ ಶೆಳ್ಳಗಿ ಕೆಎಮ್ ಪಟೇಲ್ ಖಾಜಾ ಅಜ್ಮೀರ್ ದಾವುದ್ ಪಠಾಣ್ ಮೌನೇಶ ಬೋವಿ ತಿಂಥಣಿ ಶಂಕರ ಬೊಮ್ಮನಹಳ್ಳಿ ದುರ್ಗಪ್ಪ ಬಡಿಗೇರ ನಾಗರಾಳ ರಾಜು ಕಟ್ಟಿಮನಿ ಹುಸೇನಿ ಜೀವಣಗಿ ಅಬೀದ್ ಪಗಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here