ಕಲಬುರಗಿ: ನಗರದ ಮಿಲತ್ ನಗರದ ಹೈದರಾಬಾದ್ ಕರ್ನಾಟಕ ಶೋಷಿಯಲ್ ಜಾಗೃತಿ ಫೋರಂ ವತಿಯಿಂದ ಮಹಾತ್ಮ ಗಾಂಧಿ ಜಯಂತಿಯನ್ನು ಸಂಸ್ಥೆಯ ಮುಖಂಡರ ಸಮುಖದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಲ್ತಮಾಶ್ ಆಗಮಿಸಿದ್ದು, ಸಂಸ್ಥೆಯ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಕೀಲ್ ಸರಡಗಿ, ಅಲ್ತಮಶ್ ಅತಿಥಿಗೃಹದ ಮಾಲೀಕ ಅಲ್ತಾಫ್ ಹುಸೇನ್, ಜೀಲಾನಿ ವಾಲ್ ಕಂಡಿ, ಸಯ್ಯದ್ ಸಬೀರ್ ಹುಸೇನಿ, ಫಕರೊದ್ದೀನ್, ಅಬ್ದುಲ್ ಸಲೀಮ್ ಸೇರಿದಂತೆ ಮುಂತಾದವರು ಇದ್ದರು.