ದೇವಾಪುರದಲ್ಲಿ ಮಹಾನಾಯಕ ಧಾರಾವಾಹಿಗೆ ಬೆಂಬಲಿಸಿ ಬ್ಯಾನರ್ ಅನಾವರಣ

0
101

ಸುರಪುರ: ತಾಲೂಕಿನ ದೇವಾಪುರ ಕ್ರಾಸ್‌ಲ್ಲಿಯ ಬೀದರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣಗೊಳಿಸಲಾಯಿತು.

ಬ್ಯಾನರ್ ಉದ್ಘಾಟಿಸಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಮಾತನಾಡಿ,ಡಾ: ಬಾಬಾ ಸಾಹೇಬ್ ಅಂಬೇಡ್ಕರರು ತಮ್ಮ ಬಾಲ್ಯದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಅನುಭವಿಸಿ ಅದನ್ನೆ ಸ್ಪೂರ್ಥಿಯಾಗಿಸಿಕೊಂಡು ಜಗತ್ತೆ ಮೆಚ್ಚುವಂತಹ ಭಾರತ ಸಂವಿಧಾನವನ್ನು ರಚಿಸಿಕೊಟ್ಟ ಮಹನಿಯರಾಗಿದ್ದಾರೆ ಅವರ ಬಾಲ್ಯ ಮತ್ತು ಬದುಕಿನ ಸಾಧನೆಯನ್ನು ನಮ್ಮೆಲ್ಲರಿಗೆ ತೋರಿಸುವ ಮೂಲಕ ಝೀ ಕನ್ನಡ ವಾಹಿನಿ ನಮಗೆಲ್ಲರಿಗು ಮೆಚ್ಚುಗೆಯ ವಾಹಿನಿಯಾಗಿ ಹೊರಹೊಮ್ಮಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಾಜಿ ನಗರಸಭೆಯ ಸದಸ್ಯ ವೆಂಕಟೇಶ ಹೊಸ್ಮನಿ ಮಾತನಾಡಿ,ಮಹಾನಾಯಕ ಧಾರವಾಹಿಯು ಇಡೀ ನಾಡಿನ ಎಲ್ಲರ ಮನವನ್ನು ಗೆದ್ದಿದೆ,ಇದನ್ನು ಸಹಿಸದ ಕೋಮುವಾದಿಗಳು ರಾಘವೇಂದ್ರ ಹುಣಸೂರವರಿಗೆ ಕರೆ ಮಾಡಿ ಮಹಾನಾಯಕ ಧಾರಾವಾಹಿ ಪ್ರಸಾರ ನಿಲ್ಲಿಸುವಂತೆ ಬೆದರಿಕೆ ಒಡ್ಡಲಾಗುತ್ತಿದೆ ಎನ್ನುವುದು ನೋವಿನ ಸಂಗತಿಯಾಗಿದೆ.ಈ ದೇಶದ ಮೂಲನಿವಾಸಿಗಳು ಇಂತಹ ಯಾವುದೇ ಬೆದರಿಕೆಗೆ ಹೆದರುವುದಿಲ್ಲ ಎಂಬುದನ್ನು ತೋರಿಸಲು ಈ ಮಹಾನಾಯಕ ಧಾರಾವಾಹಿಯ ಬ್ಯಾನರ್ ಎಲ್ಲೆಡೆ ಹಾಕುವ ಮೂಲಕ ಎಲ್ಲರು ಝೀ ಕನ್ನಡ ವಾಹಿನಿ ಮತ್ತು ರಾಘವೇಂದ್ರ ಹುಣಸೂರರ ಬೆಂಬಲಕ್ಕೆ ನಿಲ್ಲೋಣ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಡಾ:ಬಿ.ಆರ್.ಅಂಬೇಡ್ಕರರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ನಮಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ನಂದನಗೌಡ ಪಾಟೀಲ್ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಹೋರಾಟಗಾರರಾದ ರಾಹುಲ್ ಹುಲಿಮನಿ ಮಾಳಪ್ಪ ಕಿರದದಳ್ಳಿ ಬಸನಗೌಡ ರಾಜಾಪುರ ಅಶೋಕ ಕವಲಿ ಚನ್ನಪ್ಪಗೌಡ ಶಿವಲಿಂಗ ಹಸನಾಪುರ ರಾಮುನಾಯಕ ಅರಳಳ್ಳಿ ಚನ್ನಪ್ಪ ತಳವಾರ ಸೈದಪ್ಪ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here