ಆಳಂದ: ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಖಜೂರಿ ಗ್ರಾಮದ ಹಣಮಂತ ಶೇರಿ ಅವರನ್ನು ನೇಮಕ ಮಾಡಲಾಗಿದೆ.
ತಾಲೂಕಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಚುಟುಕು ಸಾಹಿತ್ಯ ಪರಿಷತನ ಕಾರ್ಯಕ್ರಮಗಳನ್ನು ಮನೆ ಮನಗಳಿಗೆ ತಲುಪಿಸುವ ಮಹತ್ತರ ಜವಬ್ದಾರಿಯನ್ನು ಹೊರಬೇಕು ಎಂದು ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ.
ತಾಲೂಕಿನ ಪದಾಧಿಕಾರಿಗಳನ್ನು ನೇಮಕಮಾಡಿ ಒಂದು ವಾರದೊಳಗೆ ಜಿಲ್ಲಾಧ್ಯಕ್ಷರಿಂದ ಅನುಮೋದನೆ ಪಡೆಯಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಶರಣಬಸಪ್ಪ ವಡ್ಡಣಕೇರಿ, ಕಾರ್ಯಾಧ್ಯಕ್ಷ ರವಿಕುಮಾರ ಹೂಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.