ಖರ್ಗೆ 50 ವರ್ಷ ಅಧಿಕಾರದಲ್ಲಿದ್ದರೂ ಈ ಭಾಗಕ್ಕೆ ಏನು ಅಭಿವೃದ್ದಿ ಮಾಡಲಿಲ್ಲ: ರವಿಕುಮಾರ್

0
109

ಕಲಬುರಗಿ: ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಸಭೆ ಹಿನ್ನೆಲೆಯಲ್ಲಿ ಇಂದು ಸೇಡಂ ವಿಧಾನಸಭಾ ಕ್ಷೇತ್ರದ ಮುಧೋಳ ಗ್ರಾಮದಲ್ಲಿ “ದಲಿತ ಸಮಾವೇಶ”  ನಡೆಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ ಖರ್ಗೆಯವರು 50 ವರ್ಷ ಅಧಿಕಾರದಲ್ಲಿದ್ದರೂ ಈ ಭಾಗ ಏನು ಅಭಿವೃದ್ದಿ ಮಾಡಲಿಲ್ಲ, ಕೇವಲ ತಮ್ಮ ಅಭಿವೃದ್ದಿ ಮಾತ್ರ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹೈದ್ರಾಬಾದ್ ಕರ್ನಾಟಕದ ಕಲಬುರಗಿ ಭಾಗದ ಯುವಕರು,ಮಹಿಳೆಯರು, ಕೂಲಿಕಾರ್ಮಿಕರು ಉದ್ಯೋಗವಿಲ್ಲದೇ, ಮುಂಬೈ, ಬೆಂಗಳೂರು ಸೇರಿದಂತೆ ಇತರೆಡೆ ಗುಳೆಗೆ ತೆರಳುವಂತೆ ಮಾಡಿದ್ದೇ ಖರ್ಗೆ 50 ವರ್ಷದ ಸಾಧನೆಯಾಗಿದೆ. 50 ವರ್ಷ ಅಧಿಕಾರದಲ್ಲಿದ್ದರೂ ಯಾವುದೇ ಉದ್ಯೋಗ ನೀಡುವ ಯೋಜನೆ ಮಾಡಲಿಲ್ಲ, ಕೇವಲ ತಮ್ಮ ಅಭಿವೃದ್ದಿಯನ್ನು ಮಾತ್ರ ಮಾಡಿಕೊಂಡಿದ್ದೇ ಖರ್ಗೆ ಸಾಧನೆ.

Contact Your\'s Advertisement; 9902492681

ಮೋದಿ ಸರ್ಕಾರ ಕಳೆದ 5 ವರ್ಷದಲ್ಲಿ ಹಲವಾರು ಜನಪರ ಯೋಜನೆ ಜಾರಿಗೊಳಿಸಿದ್ದಾರೆ, ದೇಶದ ಅಭಿವೃದ್ಧಿಯನ್ನು ಮಾಡಿದ್ದಾರೆ. ಹೀಗಾಗಿ ಈ  ಭಾರಿ ಕಲಬುರಗಿಯ ಸಮಗ್ರ ವಿಕಾಸಕ್ಕಾಗಿ ಬಿಜೆಪಿ ಬೆಂಬಲಿಸಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಶ್ರೀಮತಿ ರತ್ನಪ್ರಭಾ, ಅಭ್ಯರ್ಥಿ ಡಾ.ಉಮೇಶ್ ಜಾಧವ್, ಮುಖಂಡರಾಡ ಶ್ರೀ ಮಾಲೀಕಯ್ಯ ಗುತ್ತೇದಾರ, ಶ್ರೀ ಶಶೀಲ್ ನಮೋಶಿ, ಶಾಸಕ ಶ್ರೀ ರಾಜಕುಮಾರ ಪಾಟೀಲ ತೆಲ್ಕೂರ ಸೇರಿದಂತೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here