ಪ್ರವಾಹದಿಂದ ಕೊಚ್ಚಿ ಹೋದ ನರಬೋಳಿ ಯುವಕ: ಕುಟುಂಬಸ್ಥರಿಗೆ ಶಾಸಕರ ಸಾಂತ್ವಾನ

0
56

ಜೇವರ್ಗಿ: ಭೀಕರ ಪ್ರವಾಹದಿಂದ ನರಬೋಳಿ ಯುವಕ ಭಗವಾನ್ ತಿಪ್ಪಣ್ಣ ಹಡಪದ (21) ಯುವಕ ಭೀಮಾ ನದಿಯಲ್ಲಿ ಕೊಚ್ಚಿಹೋಗಿ ಕಣ್ಮರೆಯಾದ, ಮುಳಗಡೆಯಾಗಿರುವ ಕಾರಣ ನೀರಿನ ಹರಿವು ಹೆಚ್ಚಾಗಿದ್ದು ಶೋಧಕಾರ್ಯ ನಿಧಾನಗತಿಯಲ್ಲಿ ನಡೆಯುತ್ತದೆ.

ಕುಟುಂಬದ ಸದಸ್ಯರ ಮನೆಗೆ ಭೇಟಿ ನೀಡಿದ ಶಾಸಕ ಡಾ.ಅಜಯ್ ಸಿಂಗ್ ಸಾಂತ್ವನವನ್ನು ನೀಡಿ, ಬಾರಿ ಅತಿಯಾದ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿದ್ದು ಈ ಕುರಿತಂತೆ ತೀವ್ರ ಶೋಧ ಕಾರ್ಯ ನಡೆದಿದೆ ಆದಷ್ಟು ಬೇಗನೆ ಪತ್ತೆ ಹಚ್ಚಲಾಗುವುದು ಭರವಸೆ ನೀಡಿದರು.

Contact Your\'s Advertisement; 9902492681

ತಹಸೀಲ್ದಾರರಾದ ಸಿದ್ದರಾಯ್ ಭೋಸಗಿ ಹಾಗು ಪೊಲೀಸ್ ಇಲಾಖೆಗೆ ಶೋಧ ಕಾರ್ಯ ತೀವ್ರ ಗೊಳಿಸುವಂತೆ ಸೂಚನೆ ನೀಡಿದರು, ಕುಟುಂಬದ ಸದಸ್ಯರಿಗೆ ವೃತ್ತಿ ಗೆಡದಂತೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ್ ಸೀರಿ, ಕಾಶಿರಾಯ್ ಗೌಡ ಯಲಗೋಡ, ರಾಘವೇಂದ್ರ ಕುಲಕರ್ಣಿ, ಶಿವು ಕಲ್ಲಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here