ಶಾಲಾ ಶಿಕ್ಷಕರ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆ

0
23

ಕಲಬುರರ್ಗಿ; ಶಿಕ್ಷಕರಿಗೆ ಬಹುದಿನಗಳಿಂದ ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವೆ ಮತ್ತು ಅವರ ಏಳ್ಗೆಗೆ ಪ್ರಥಮ ಅದ್ಯತೆ ನೀಡುವೆ ಹಾಗೂ ಶಿಕ್ಷಕರಿಗೆ ಬಡ್ತಿ ದೊರಕಿಸುವ ಮತ್ತು ಸಮಸೈ ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಿರುವೆ. ಮುಂದೆಯೂ ಇದೇ ರೀತಿ ಕಾರ್ಯನಿರ್ವಹಿಸುವೆ ಎಂದು ಕರ್ನಾಟಕ ರಾಜ್ಯ ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲಯ್ಯ ಗುತ್ತೇದಾರ ಎಂದರು.

ನಗರದ ಕನ್ನಡ ಭವನದಲ್ಲಿ ನಡೆದ ಪದಾಧಿಕಾರಿಗಳ ಹಾಗೂ ಸರ್ವಸದಸ್ಯರ ಸಾಮಾನ್ಯ ಸಭೆ ಮತ್ತು ಅಭಿನಂದನಾ ಸಮಾರಂಭವನ್ನು ರಾಜ್ಯ ಘಟಕದ ಅಧ್ಯಕ್ಷ ಎಂ.ವಿ.ನಾರಾಯಣಸ್ವಾಮಿ ಉದ್ಘಾಟಿಸಿ ಮಾತನಾಡಿ, ಸಂಘದ ಜಿಲ್ಲಾ ಘಟಕವು ಮಲ್ಲಯ್ಯ ಗುತ್ತೇದಾರ ನೇತ್ಮತ್ವದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನಷ್ವು ಸಾಧನೆ ಮಾಡಲಿ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಚಂದ್ರು ನುಗ್ಗಿ, ಹೆಚ್.ಡಿ ಗಂಗಣ್ಣವರೆ, ಯುವರಾಜ ಕೆ, ಬಸವರಾಜ ಕೆ, ಪುಷ್ಪಲತಾ, ಮಹಾಲಿಂಗಪ್ಪ ಮೂಲಗೆ, ಬಾಬು ಮೌರ್ಯ, ಪರಮೇಶ್ವರ ಓಕಳಿ, ಮಹಿಬೂಬ ಮಡಕಿ, ಚಂದ್ರಶೇಖರ ಪೂಜಾರಿ, ನರಸಪ್ಪ ಬಿರಾದಾರ, ಶಂಭುಲಿಂಗಯ್ಯ ಸ್ವಾಮಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here