ಜನರು ಮನೆಯಲ್ಲಿದ್ದು ಸರಳವಾಗಿ ದಸರಾ ಆಚರಿಸಿ: ರಾಜಾ ವೆಂಕಟಪ್ಪ ನಾಯಕ

0
36

ಸುರಪುರ: ಮಹಾಮಾರಿ ಕರೊನಾ ಹರುಡುವಿಕೆಯು ದಿನೆ ದಿನೆ ಹೆಚ್ಚುತ್ತಿದ್ದು ಕರೊನಾ ತಡೆಯುವ ನಿಟ್ಟಿನಲ್ಲಿ ಜನರು ಜಾಗೃತಿ ವಹಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಾಲೂಕಿನ ಜನತೆಗೆ ಸಲಹೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಸಾರ್ವಜನಿಕರು ಹಬ್ಬದ ನೆಪದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳದೆ, ಮಾಸ್ಕ ಧರಿಸದೆ ತಿರುಗಾಡಿದರೆ ಕೊರೊನಾ ಸೊಂಕು ಹರಡುವ ಸಾಧ್ಯತೆ ಇರುವುದರಿಂದ ಕ್ಷೇತ್ರದ ಸಮಸ್ತ ಜನತೆ ಸೊಂಕು ಹರಡದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಮನೆಯಲ್ಲಿಯೆ ಈ ಬಾರಿಯ ದಸರಾ ಹಬ್ಬವನ್ನು ಸರಳವಾಗಿ ಆಚರಿಸಬೇಕುಂದು ವಿನಂತಿಸುತ್ತೇನೆ.

Contact Your\'s Advertisement; 9902492681

ಅಲ್ಲದೆ ಈ ಬಾರಿ ವಾಡಿಕೆಗೂ ಮಿರಿ ಹೆಚ್ಚು ಮಳೆಯಾಗಿ ಅತಿವೃಷ್ಠಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿರುವ ಪರಿಸ್ಥಿತಿಯಲ್ಲಿ ನಾವುಗಳು ಹಬ್ಬವನ್ನು ಸರಳವಾಗಿ ಆಚರಿಸಿ ಅವರ ಕಷ್ಟಕ್ಕೆ ಸ್ಪಂದಿಸುವ ರೀತಿಯಲ್ಲಿ ಚಿಂತಿಸಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here