ಜಿಲ್ಲಾಡಳಿತದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಗೆ ನಿರ್ಲಕ್ಷ್ಯ: ಅರುಣ್ ಕುಮಾರ್ ಪಾಟೀಲ್ ಅಸಮಧಾನ

0
41

ಕಲಬುರಗಿ: ನಗರದ ರಂಗಮಂದಿರದಲ್ಲಿ ಇಂದು ಜಿಲ್ಲಾಡಳಿತ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಜಿಲ್ಲಾ ವೀರಶೈವ ಸಮಾಜ ನೇತೃತ್ವದಲ್ಲಿ ಜಿಲ್ಲಾಡಳಿತದ ಪರವಾಗಿ ಎಸಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ರಾಣಿಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಕೊಡಲಂಗರಗಾ ಮಾತನಾಡಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ವೀರಶೈವ ಲಿಂಗಾಯತ ಸಮಾಜದ ವೀರವನಿತೆ ಸ್ವಾತಂತ್ರ ಹೋರಾಟಗಾರ್ತಿ ವೀರಶೈವ ಸಮಾಜ ಅಷ್ಟೇ ಅಲ್ಲ ಎಲ್ಲಾ ಸಮಾಜದವರನ್ನು ಪ್ರೀತಿಸಿ ಗೌರವಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ತಾಯ್ನಾಡಿಗಾಗಿ ಸೇವೆಸಲ್ಲಿಸಿದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕರೋನಾ ಮಾಹಾಮಾರಿ ಅಂಗವಾಗಿ ಜಿಲ್ಲಾಡಳಿತ ಸರಳವಾಗಿ ಆಚರಿಸಿದ್ದು ವಿರೋಧವಿಲ್ಲ ಆದರೆ ಒಂದು ಬ್ಯಾನರನ್ನು ಕೂಡ ಮಾಡದೆ ಸರಿಯಾದ ಒಂದು ಮಾಲೆಯನ್ನು ತರದೆ ನಿರ್ಲಕ್ಷಿಸಿ ಕಿತ್ತೂರು ರಾಣಿ  ಚೆನ್ನಮ್ಮಾಜಿಗೆ ಮತ್ತು ವೀರಶೈವ ಲಿಂಗಾಯತ ಧರ್ಮಕ್ಕೆ ಜಿಲ್ಲಾಡಳಿತ ಅವಮಾನ ಮಾಡಿದೆ ಅದನ್ನು ಉಗ್ರವಾಗಿ ಖಂಡಿಸುತ್ತೇವೆ ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ರಾಜ್ಯ ಸರಕಾರದ ಗಮನಕ್ಕೆ ತಂದು ಚೆನ್ನಮ್ಮಾಜಿ ಜಯಂತಿ ನಿರ್ಲಕ್ಷ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಹೇಳಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು ಕಿತ್ತೂರಾಣಿ ಚೆನ್ನಮ್ಮ ಜಯಂತಿ ಈಬಾರಿ ಕರೋನ ಸಲುವಾಗಿ ಸರಳ ರೀತಿಯ ಆಚರಿಸಿದ್ದೇವೆ ಮುಂದಿನ ದಿನಗಳಲ್ಲಿ ಕಿತ್ತೂರಾಣಿ ಚೆನ್ನಮ್ಮ ಜಯಂತಿಯನ್ನು ಮನೆಮನೆಗಳಲ್ಲಿ ಆಚರಿಸುವ ಮುಖಾಂತರ ಕಿತ್ತೂರಾಣಿ ಚೆನ್ನಮ್ಮನ ಧೈರ್ಯ ಸಾಹಸಗಳನ್ನು ನಮ್ಮ ಸಮಾಜದ ಯುವಕರಿಗೆ ಯುವತಿಯರಿಗೆ ತಿಳಿಸುವಂತ ಕೆಲಸ ಜಿಲ್ಲಾ ವೀರಶೈವ ಸಮಾಜ ಮಾಡುತ್ತದೆ ಎಂದು ಹೇಳಿದರು.

ಸಂದರ್ಭದಲ್ಲಿ ವೀರಶೈವ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಶರಣಕುಮಾರ್ ಮೋದಿ ಕಲ್ಯಾಣಪ್ಪ ಮಲಕೆಡ್  ಶ್ರೀಶೈಲ ಗೂಳಿ  ಯುವ ಘಟಕ ಜಿಲ್ಲಾ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ ಮಹಾಸಭಾ ಉಪಾಧ್ಯಕ್ಷ ಸಿದ್ದು ಪಾಟೀಲ್ ಅಬ್ಜಲ್ಪುರ್ ಕರ್ ವೀರಣ್ಣಗೂೕಳೆದ ಕಾರ್ಯದರ್ಶಿಗಳಾದ ಡಾ ಎಸ್ ಎಸ್ ಪಾಟೀಲ್ ಅಶೋಕ್ ಪಟ್ಟಣಶೆಟ್ಟಿ ಶೀಲ ಮುತ್ತಿನ ಡಾಕ್ಟರ್ ಸುಧಾ ಆಲ್ ಕಾಯಿ ಚಂದನ ,ಸಾವಿತ್ರಿ ಕುಳಗೇರಿ ಶ್ರೀದೇವಿ ಸಾಸನಗೆರಾ ಶಾರದಾ ವಿ ಪಾಟಿಲ ನಗರ ಅಧ್ಯಕ್ಷರಾದ ಉದಯ ಪಾಟೀಲ್ ಶರಣಬಸಪ್ಪ ಭೂಸನೂರ್ ಸಂತೋಷ ಗಂಗಸಿರಿ ಭೀಮಶಂಕರ್, ರವಿ ಶಿರಗಪೂರ್ ಮಹೇಶ್ ಕೆ ಪಾಟೀಲ್, ಶರಣ್ ಟೆಂಗಳಿ ಮುನ್ನೊಳ್ಳಿ ನಾಗಲಿಂಗ ಮಠಪತಿ, ಮುತ್ತು, ಸೋಮಶೇಖರ್ ಹಿರೇಮಠ್ ಬಸವರಾಜ ಪಾಟಿಲ ವರಚನಳಿ ಸೆಂಬು ಪಾಟಿಲ  ಬಳಬಟ್ಟಿ ವೀರೇಶ್ ನೀಲಾ ಶಾಂತ ರೆಡ್ಡಿ ಮಚ್ಚೇಂದ್ರ ಮೂಲಗೆ ಶಾಂತು ದುದನಿ ಜಗನ್ನಾಥ್ ಪಟ್ಟಣಶೆಟಿ ಅಣವಿರ ಪಾಟಿಲ ಶರಣು ಸಜನಶೇಟಿ ಇನ್ನಿತರರಿದ್ದರು .

ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಜಿಲ್ಲಾಡಳಿತ ನಿರ್ಲಕ್ಷ ಖಂಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವಜಾ ಗೂೕಳಿಸಲು ಒತ್ತಾಯಿಸಿ ಉಗ್ರ ಪ್ರತಿಭಟನೆ ರಸ್ತೆ ಬಂದ್ ಮಾಡಿ ಜಿಲ್ಲಾಡಳಿತ ವಿರುದ್ಧ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here