ಯಡಿಯೂರಪ್ಪನವರ ಮೇಲೆ ವಿಶ್ವಾಸವಿಟ್ಟು ನಮೋಶಿಗೆ ಮತ ನೀಡಿ

0
152

ಶಹಾಬಾದ:ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎಂದು ಚಿತ್ತಾಪೂರ ಬಿಜೆಪಿ ಮಂಡಲ ಅಧ್ಯಕ್ಷ ನೀಲಕಂಠರಾವ ಪಾಟೀಲ ಭಂಕೂರ ಹೇಳಿದರು.

ಅವರು ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ನಿಮಿತ್ತ ನಗರದ ವಿವಿಧ ಪ್ರದೇಶಗಳಿಗೆ ಬೇಟಿ ನೀಡಿ ಶಿಕ್ಷಕರಿಗೆ ನಮೋಶಿ ಅವರಿಗೆ ಮತಯಾಚಿಸುವಂತೆ ಕೋರಿ ಮಾತನಾಡಿದರು.

Contact Your\'s Advertisement; 9902492681

ಈ ಹಿಂದಿನ ವಿಧಾನ ಪರಿಷತ್ ಸದಸ್ಯ ಯಾರಿಗೂ ಸಿಗದ ಹಾಗೂ ಯಾರ ಕರೆಯನ್ನು ಸ್ವೀಕರಿಸಿಲ್ಲ ಎಂಬ ದೂರು ಬಂದಿವೆ.ಅಲ್ಲದೇ ಯಾವುದೇ ಕಾರ್ಯಗಳು ಅವರಿಂದ ಆಗಿಲ್ಲ. ಈಗ ನಮ್ಮ ಸರಕಾರವಿರುವುದರಿಂದ ಶಶೀಲ ನಮೋಶಿ ಅವರನ್ನು ಗೆಲುವು ಸಾಧಿಸಿದರೇ ಬಹುತೇಖ ಸಮಸ್ಯೆಗಳು ಬಗೆಹರಿಯಲಿವೆ. ಯಡಿಯೂರಪ್ಪನವರು ಸರಕಾರಿ ನೌಕರರ ಹಿತ ಕಾಯುವ ಮುಖ್ಯಮಂತ್ರಿ.ಯಾವತ್ತಿಗೂ ಅವರ ಮೇಲೆ ವಿಶ್ವಾಸವಿಟ್ಟು ಈ ಬಾರಿ ನಮೋಶಿ ಪರ ಮತಚಲಾಯಿಸುವಂತೆ ಮನವಿ ಮಾಡಿದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಕನಕಪ್ಪ ದಂಡಗುಲಕರ್, ಗೋಪಾಲ ರಾಠೋಡ, ಭರತ ಮುತ್ತಗಾ,ನಗರಸಭೆ ಸದಸ್ಯ ರವಿ ರಾಠೋಡ,ಯಲ್ಲಾಲಿಂಗ ಪೂಜಾರಿ, ಶಿವಪ್ರಕಾಶ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here