ನಾಡು-ನುಡಿ ಉಳಿಸಲು ಸಂಘಟಿತರಾಗಿ: ಯಳಸಂಗಿ

0
34

ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿಂಬರ್ಗಾ ವಲಯ ಘಟಕ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಮಾಸಿಕ ಸಭೆ ನಡೆಯಿತು. ನಾಡಿನ ನೆಲ, ಜಲ,ಭಾಷೆ,ಸಾಹಿತ್ಯ ಉಳಿಸಿ ಬೆಳೆಸಲು ಕನ್ನಡಿಗರು ಮುಂದಾಗಬೇಕು ಹಾಗೂ ವಲಯ ಮಟ್ಟದಲ್ಲಿ ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ನಿಂಬರ್ಗಾ ವಲಯ ಕ.ರ.ವೇ ಅಧ್ಯಕ್ಷರಾದ ಬಸವರಾಜ ಯಳಸಂಗಿ,ಯುವ ಘಟಕ ಅಧ್ಯಕ್ಷ ಪ್ರವೀಣ್ ಮಿಟೆಕಾರ,ಪ್ರ.ಕಾರ್ಯದರ್ಶಿ ಮಲ್ಲಿನಾಥ ನಾಟಿಕಾರ, ಗ್ರಾಮ ಘಟಕ ಅಧ್ಯಕ್ಷ ಶ್ರೀಶೈಲ ನಿಗಶೆಟ್ಟಿ, ರೈತ ಘಟಕ ಅಧ್ಯಕ್ಷ ಧರ್ಮರಾಯ ವಗ್ದರ್ಗಿ, ಉಪಾಧ್ಯಕ್ಷ ಮಹಾದೇವ ಮಿಟೆಕಾರ, ಕಾರ್ಯದರ್ಶಿಗಳಾದ ಕ್ಷೇಮಲಿಂಗ ಕಂಭಾರ, ಸಚಿನಕುಮಾರ ಶೀಲವಂತ,ಶಿವಕುಮಾರ ಕುಂಭಾರ, ಹಾಗೂ ಸೋಮನಾಥ ಹಿರೇಮಠ, ವಿನೋದ್ ಕುಮಾರ್ ಗಣೆಚಾರಿ, ಚಂದ್ರಕಾಂತ ಧೋತ್ರೆ,ಮಲ್ಲಿಕಾರ್ಜುನ, ರಾಜು ಮಡಿವಾಳ, ಅನಿಲ್ ನಾಗುರ,ಅನಿಲಕುಮಾರ ಸ್ವಾಮಿ ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here