ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ರೋಜಾ ಅಣಬಿ ಗ್ರಾಮಕ್ಕೆ ಕಲಬುರಗಿ ಜಿಲ್ಲಾ ಖಾಜಿ ಅಧ್ಯಕ್ಷರಾದ ಡಾ. ಹಾಮಿದ್ ಫೈಸಲ್ ಸಿದ್ದಿಕಿ ಅವರ ನೇತೃತ್ವದಲ್ಲಿ 180 ಪ್ರವಾಹ ಪೀಡಿತ ಸಂತ್ರಸ್ತ ಕುಟುಂಬಗಳಿಗೆ ದವಸಧಾನ್ಯಗಳ ಕಿಟ್ಟನ್ನು ವಿತರಿಸಿದರು.
ನಯಾ ಸವೇರಾ ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ ಸಲಹೆಯಂತೆ ಸಂಕಷ್ಟದಲ್ಲಿರುವ ಸಹಾಯಕ್ಕೆ ಧಾವಿಸಿದ ಖಾಜಿಯವರು 10 ಕ್ವಿಂಟಲ್ ಅಕ್ಕಿ ಒಂದು ಕ್ವಿಂಟಲ್ ಬೆಳೆ ಪ್ಯಾಕೆಟ್ ಕಿಟ್ ಗಳನ್ನು ತಯಾರಿ ನಯ ಸವೆರ ಸಂಘಟನೆ ವತಿಯಿಂದ ಹಂಚಲಾಯಿತು.
ಈ ಕಾರ್ಯಕ್ರಮದಲ್ಲಿ ಹಜರತ್ ತವಕ್ಕಲ್ ಬುರ್ಹಾನ್ ಉದ್ದಿನ್ (ರ) ರೋಜಾ ಪಿಠಾಧಿಪತಿಗಳಾದ ಸೈಯದ್ ಮುಕ್ತಾರ್ ಪಾಶ, ಖಾಜಿ ಪರಿವಾರದ ಸದಸ್ಯರಾದ ಡಾ. ಫೈಸಲ್ ಹಮೀದ್ ಸಿದ್ದಿಕಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಲೀಮ ಚಿತಾಪುರ, ಹೈದರ್ ಅಲಿ ಇನಮ್ದಾರ್, ಸೈರಾ ಬಾನು ಅಬ್ದುಲ್ ವಾಹಿದ್, ಸಲೀಮ್ ಸಗರಿ, ಯುನುಸ್ ಪಟೇಲ್ ಹಡಗಿಲ ಸೇರಿದಂತೆ ಇನ್ನೂ ಹಲವಾರು ಮುಖ್ಯಸ್ಥರು ಹಾಜರಿದ್ದರು.