ಬಿಜೆಪಿ ಕಚೇರಿಯಲ್ಲಿ ಶ್ರೀ ಡಾ. ರಾಮರಾವ ಮಹಾರಾಜರಗೆ ಶ್ರದ್ಧಾಂಜಲಿ

0
62

ವಾಡಿ: ಸಾಕ್ಷತಾ ದೇವರಾಗಿದ್ದರು ನಮ್ಮ ರಾಮರಾವ್ ಮಹಾರಾಜರು ಎಂದು ಮಾಜಿ ಶಾಸಕರಾದ ವಾಲ್ಮೀಕಿ ನಾಯಕ ಹೇಳಿದರು.

ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಲ್ಲಿನ ಶ್ರೀ ಡಾ. ರಾಮರಾವ ಮಹಾರಾಜರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ದುಃಖ ತಪ್ತರಾಗಿ ಮಾತನಾಡುತ್ತಾ ಅವರೊಡನೆ ಅತಿ ಹತ್ತಿರದ ಗುರು ಶಿಷ್ಯರ ಸಂಭದ ನಮ್ಮದಾಗಿತ್ತು,  ಅವರ ದೈವಾಧೀನರಾದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ‌‌. ನಮ್ಮ ಬಂಜಾರ  ಸಮಾಜದ ಅರಾಧ್ಯದೈವ ಸ್ವರೂಪಿಗಳಾದ ನನ್ನ ಗುರುಗಳು ಭಾರತ ದೇಶದಲ್ಲಿ ಬಂಜಾರಾ ಸಮಾಜದ ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ಮಹಾರಾಜರು ನಮ್ಮನ್ನು ಅಗಲಿದ್ದು, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರನ್ನು ಕಳೆದುಕೊಂಡ ನಾವು ಇಂದು ಅನಾಥರಾಗಿದ್ದೇವೆ. ನಮ್ಮೆಲ್ಲರ ಹೃದಯ ಮಂದಿರದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

Contact Your\'s Advertisement; 9902492681

ಬಿಜೆಪಿ ತಾಲ್ಲೂಕ ಎಸ್ ಸಿ ಮೂರ್ಚಾದ ಅಧ್ಯಕ್ಷರಾದ ರಾಜು ಮುಕ್ಕಣ್ಣ ಶ್ರೀ ಡಾ ರಾಮರಾವ್ ಮಹಾರಾಜರು ಸ್ವರ್ಗವಾಸಿ ಯಾಗಿದ್ದರು ಅವರ ಕೃಪಾರ್ಶಿವಾದ ನಮ್ಮ ಮೇಲೆ ಸದಾ ಇರುವುದು ಅವರು ನುಡಿದಂತೆ ನಡೆದ ಮಹಾನ ಜ್ಞಾನಿಗಳಾಗದ್ದರು, ಅವರಿಗೆ ಇದ್ದ ಧರ್ಮನಿಷ್ಠೆ, ಧರ್ಮೋಪದೇಶ ನಮ್ಮ ಬದುಕಿಗೆ ಬೆಳಕಾಗಲಿ  ಎಂದರು.

ಸ್ಥಳೀಯ ಅಧ್ಯಕ್ಷರಾದ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಯುವ ಮೂರ್ಚಾದ ಅಧ್ಯಕ್ಷರಾದ ರವಿ ಕಾರಬಾರಿ,ಪುರಸಭೆ ಸದಸ್ಯರಾದ ಭೀಮಶಾ ಜಿರೋಳ್ಳಿ, ಭೀಮರಾಯ ನಾಯಿಕೂಡಿ, ಮುಖಂಡರಾದ ವಿಠಲ ನಾಯಕ, ಗಿರಿಮಲ್ಲಪ್ಪ ಕಟ್ಟೀಮನಿ,ಹರಿ ಗಲಾಂಡೆ, ಕಿಶನ್ ಜಾದವ,ರಿಚರ್ಡ್ ಮಾರೆಡ್ಡಿ,ಬಸವರಾಜ ಕಿರಣಗಿ,ದೌಲತರಾವ ಚಿತ್ತಾಪುರಕರ್,ಅಂಬದಾಸ ಜಾದವ ,ಜಗತ್ ಸಿಂಗ್ ರಾಠೋಡ್, ಶಿವರಾಮ ಜಾದವ,ಈಶ್ವರ ,ಕುಮಾರ ಚವ್ಹಾಣ ,ಪ್ರಕಾಶ ಜಾದವ, ಭರತ ರಾಠೋಡ್  ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here