ಸ್ಮಶಾನ ಭೂಮಿಗೆ ಕಂಪೌಂಡ್ ನಿರ್ಮಾಣಕ್ಕೆ ತಹಸೀಲ್ದಾರ್ ಸ್ಥಳ ಪರಿಶೀಲನೆ

0
39

ಸುರಪುರ: ನಗರದ ಹಸನಾಪುರ ರಂಗಂಪೇಟೆಯ ಸರ್ವೆ ನಂಬರ್ ೭೩/೧ ರಲ್ಲಿನ ೧ ಎಕರೆ ಜಾಗದಲ್ಲಿನ ಸ್ಮಶಾನ ಭೂಮಿಗೆ ಕಂಪೌಂಡ್ ನಿರ್ಮಾಣಕ್ಕೆ ತಹಸೀಲ್ದಾರ್ ನಿಂಗಣ್ಣ ಬಿರಾದಾವ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಈ ಕುರಿತು ಅನೇಕ ತಿಂಗಳುಗಳಿಂದ ಇಲ್ಲಿಯ ಸ್ಮಶಾನದ ಜಾಗ ಒತ್ತುವರಿಯಾಗಿದೆ ಎಂದು ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಮನವಿ ಮಾಡಿ ತಮಗೆ ಸ್ಮಶಾನ ಜಾಗವಮನ್ನು ದೊರಕಿಸಿ ಕೊಡುವಂತೆ ಮನವಿ ಮಾಡುತ್ತಿದ್ದರು.ಈಗ ಸ್ಮಶಾನ ಭೂಮಿಗೆ ೫ ಲಕ್ಷ ರೂಪಾಯಿಗಳ ಕಂಪೌಂಡ್ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು ಇಂದು ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಗುರುಬಸಪ್ಪ ಗ್ರಾಮ ಲೆಕ್ಕಾಧಿಕಾರಿಗಳು ಹಾಗು ಮುಖಂಡರಾದ ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಚಿನ್ನಾಕಾರ ಭಗಿರಥ ಸಮಾಜದ ಮುಖಂಡ ಯಂಕಣ್ಣ ಗದ್ವಾಲ ರಾಘವೇಂದ್ರ ಕಡಬೂರ ನರಸಪ್ಪ ಚಿನ್ನಾಕಾರ್ ಬಸವರಾಜ ಚಿನ್ನಾಕಾರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here