ಶಹಾಪುರ: ಈಶಾನ್ಯ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ರಸ್ತೆಯಿಂದ ಪಕ್ಕಕ್ಕೆ ಇಳಿದಿರುವ ಘಟನೆ ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ಹತ್ತಿರ ಜರುಗಿದೆ.
ಶಹಾಪುರ ಬಸ್ ಘಟಕದ ಈ ವಾಹನ ಬೆಳಿಗ್ಗೆ ನರಬೋಳಿ ಗ್ರಾಮಕ್ಕೆ ತೆರಳಿ, ಮರಳಿ ಬರುವಾಗ ರಸ್ತೆಯ ಪಕ್ಕಕ್ಕೆ ಇಳಿದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದ್ದು, ಚಾಲಕನ ಅಜಾಗುರುಕತೆ ಹಿನ್ನೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಬಸ್ ರಸ್ತೆಯಿಂದ ಕೆಳಗೆ ಇಳಿದ ತಕ್ಷಣ ಬಸ್ ನಲ್ಲಿದ ಪ್ರಯಾಣಿಕರು ಆತಂಕಗೊಂಡು ಬಸ್ ನಿಂದ ಕೆಳಗೆ ಇಳಿಯುತ್ತಿದ್ದಂತೆ ಚಾಲಕನಿಗೆ ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದೆ.
ಬಸ್ ನಲ್ಲಿ ಸುಮಾರು 22 ಕ್ಕು ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದೆ.
Super news sir