ಅಕ್ರಮ ದನಗಳ ಸಾಗಾಣಿಕೆ: ಪ್ರಕರಣ ದಾಖಲು

0
135

ಶಹಾಬಾದ:ಯಾದಗಿರಿ ಜಿಲ್ಲೆಯ ಸುರಪೂರದಿಂದ ಕಲಬುರಗಿಗೆ ಸಾಗಿಸುತ್ತಿದ್ದ ಅಕ್ರಮ ದನಗಳ ವಾಹನವನ್ನು ತಡೆದು ಶಹಾಬಾದ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ರವಿವಾರದಂದು ನಡೆದಿದೆ.

ಸಮೀಪದ ಫೀರೋಜಾಬಾದ -ಶಹಾಬಾದ ವೃತ್ತದ ಬಳಿ ಸುರಪೂರದಿಂದ ಕಲಬುರಗಿಗೆ ಸುಮಾರು 11 ದನಗಳನ್ನು ಸಾಗಿಸಲಾಗುತ್ತಿದ್ದ ವಾಹನವನ್ನು ಶ್ರೀರಾಮ ಸೇನೆಯ ವಿಶ್ವ, ವಿನೋದ ಸಾಹುಕಾರ ಎಂಬುವವರು ತಡೆದು ಪರಿಶೀಲನೆ ಮಾಡಿ, ಅಕ್ರಮ ಗೋವುಗಳನ್ನು ಸಾಗಿಸುತ್ತಿರುವುದು ಖಚಿತವಾದ್ದರಿಂದ,ವಾಹನ, ಚಾಲಕ ಹಾಗೂ ಹನ್ನೊಂದು ದನಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ನಗರ ಪೊಲೀಸ್ ಠಾಣೆಯ ಪಿಐ ಅಮರೇಶ.ಬಿ ಅವರು ಅಕ್ರಮ ಗೋವುಗಳನ್ನು ಸಾಗಿಸುತ್ತಿದ್ದ ತೋಹಿಬ್ ಅಬ್ದುಲ್ ಎಂಬುವವನ ಮೇಲೆ ಪ್ರಕರಣ ದಾಖಲಿಸಿಕೊಂಡು, ಕಲಬುರಗಿಯ ನಂದಿ ಗೋಶಾಲೆಗೆ ಕಳುಹಿಸಿ ಕೊಟ್ಟಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ದಶರಥ ದೇಸಾಯಿ, ರಾಮು ಕುಸಾಳೆ, ಸಿದ್ರಾಮ ಕುಸಾಳೆ,ಜಯಂತ ಬೆಂಗಳೂರು, ಮಲ್ಲು ರ್ಯಾಪನೂರ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here