ಕಲಬುರಗಿ: ಮಹಾನಗರ ಜಿಲ್ಲೆಯ ಭಾರತಿಯ ಜನತಾ ಪಾರ್ಟಿ ಒಬಿಸಿ ಮೋರ್ಚಾದ ನೂತನ ಅಧ್ಯಕ್ಷರನ್ನಾಗಿ ಅರವಿಂದ ಪೊದ್ದಾರ ಅವರನ್ನು ನೇಮಕ ಮಾಡಿದ್ದಕ್ಕೆ ವಿಶ್ವಕರ್ಮ ಸಮಾಜದ ಮುಖಂಡರು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ವಿಶ್ವಕರ್ಮ ಸಮಾಜದ ಮುಖಂಡರಾದ ಕುಪ್ಪಣ್ಣ ಪೋದ್ದಾರ, ವಿಠಲರಾವ ಸುತಾರ, ಕೇಶವ ಸೀತನೂರ, ಬಿಜೆಪಿ ಹಿರಿಯ ಮುಖಂಡರಾದ ಬಸವರಾಜ ಪಂಚಾಳವಾಡಿ, ಸಿದ್ದಣ್ಣಾ ವಾಡಿ, ಚಿತ್ರಲೇಖಾ ಟೆಂಗಳಿ, ದಶರಥ ಪೋದ್ದಾರ, ಅಮೃತ ಹಳ್ಳಿ, ಕಾಳಪ್ಪ ಪಂಚಾಳ, ನಾಗರಾಜ ಪತ್ತಾರ, ವಿಶ್ವಂಬರ ಪೋದ್ದಾರ, ನಾಗೀಂದ್ರ ಆಲಗೂಡ, ಪ್ರಶಾಂತ ನಿಂಬಾಳಕರ್ ಇದ್ದರು.