ಕಾಂಗ್ರೇಸ ಪಕ್ಷ ರೈತರ ಪರ: ಮಲ್ಲಿಕಾರ್ಜುನ ಖರ್ಗೆ

0
71

ಕಲಬುರಗಿ: ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿರುವಾಗೆಲ್ಲ ರೈತರ ಪರ ಯೋಜನೆಗಳನ್ನು ಹಾಕಿಕೊಂಡು ಅವರ ಸಾಲ ಮನ್ನಾ ಮಾಡಿದೆ. ಆದರೆ ಮೋದಿ ಸರ್ಕಾರ ಏನು ಮಾಡಿದೆ? ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸದ ಅಭ್ಯರ್ಥಿ ಹಾಗೂ ಲೋಕಸಭೆ ಕಾಂಗ್ರೇಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅವರು ಇಂದು ಬಳೂರ್ಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕೇಂದ್ರದಲ್ಲಿ ಮನಮೋಹನ‌ಸಿಂಗ್ ಸರಕಾರ ಇದ್ದಾಗ 72,000 ಕೋಟಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಇದ್ದಾಗ 8,000 ಕೋಟಿ ಹಾಗೂ ಈಗ ಸಮ್ಮಿಶ್ರ ಸರಕಾರದ ಅವಧಿಯಲ್ಲಿ 40,000 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಆದರೂ ಮೋದಿ ತಮ್ಮ ಸುಳ್ಳುಗಳ ಮೂಲಕ ನಮ್ಮ ರೈತಪರ ನಿಲುವುಗಳನ್ನು ಪ್ರಶ್ನಿಸುತ್ತಾರೆ‌. ನಮಗೆ ಪ್ರಶ್ನಿಸುವ ಮುನ್ನ ತಾವು ರೈತರಿಗೆ ಏನು ಮಾಡಿದ್ದಾರೆ ಎಂದು ಉತ್ತರಿಸಲಿ ಎಂದು ವ್ಯಂಗ್ಯವಾಡಿದರು.

Contact Your\'s Advertisement; 9902492681

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ ಈಗ ಮತ ಕೇಳಲು ಬಂದಿದ್ದೇನೆ. ಏನೂ ಮಾಡದ ಬಿಜೆಪಿಯವರು ಯಾವ ನೈತಿಕತೆ ಮೇಲೆ ಮತ ಕೇಳಲು ಬರುತ್ತಾರೆ ? ಎಂದು ಪ್ರಶ್ನಿಸಿದ ಅವರು ನನ್ನನ್ನು ಸೋಲಿಸುವ ಏಕೈಕ ಉದ್ದೇಶದಿಂ ಸೋತವರೆಲ್ಲ ಒಂದಾಗಿದ್ದಾರೆ. ತಾವೇ ಗೆದ್ದಿಲ್ಲ, ನೀವೆಲ್ಲ ನನ್ನ ಜೊತೆ ಇರುವಾಗ ನನ್ನನ್ನೇನು ಸೋಲಿಸುತ್ತಾರೆ ? ಎಂದು ಪ್ರಶ್ನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here